ಶಂಕರ್ ಬಿಲ್ಡ್ ಪ್ರೋ.ದ ರಿಟೈಲ್ ಔಟ್‌ಲೆಟ್ ಶುಭಾರಂಭ

0

ಪುತ್ತೂರು: ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯಿರುವ ಹಾರ್ಡ್‌ವೇರ್ ಸಾಮಾಗ್ರಿಗಳ ಮಳಿಗೆ ಶಂಕರ್ ಬಿಲ್ಡ್ ಪ್ರೋ ಇದರ ವಿಸ್ತೃತ ರಿಟೈಲ್ ಔಟ್‌ಲೆಟ್ ಎಪಿಎಂಸಿ ರಸ್ತೆಯಲ್ಲಿ ಮಾ.16ರಂದು ಶುಭಾರಂಭಗೊಂಡಿತು. ವಿಸ್ತೃತ ಸಂಸ್ಥೆಯನ್ನು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಶಂಕರ್ ಬಿಲ್ಡ್ ಪ್ರೋ ಇದರ ಜನರಲ್ ಮ್ಯಾನೇಜರ್ ವಸಂತ ಮೋಹನ್, ಡಿಸ್ಟ್ರಿಬ್ಯೂಷನ್ ಮ್ಯಾನೇಜರ್ ಸತೀಶ್ಚಂದ್ರ ಆಳ್ವ, ಪುತ್ತೂರು ಮಳಿಗೆಯ ವ್ಯವಸ್ಥಾಪಕ ಯೋಗಿನಾಥ್, ಐಶ್ವರ್ಯ ಅರ್ಥ್‌ಮೂವರ‍್ಸ್‌ನ ರಘುರಾಮ ಭಟ್, ಭೂಮ ಕನ್‌ಸ್ಟ್ರಕ್ಷನ್‌ನ ರಾಜೇಶ್, ಮಹಾಗಣಪತಿ ಇಂಜಿನಿಯರಿಂಗ್ ವರ್ಕ್ಸ್‌ನ ಪ್ರಮೋದ್ ಪೂಜಾರಿ, ಅನಿತಾ ಆಯಿಲ್ ಮಿಲ್‌ನ ಅಜಿತ್ ನಾಯಕ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

ಸಂಸ್ಥೆಯಲ್ಲಿ ಜಿ.ಐ ಪೈಪ್, ಎಂ.ಎಸ್ ಪೈಪ್, ಸಿ.ಆರ್&ಎಚ್.ಆರ್ ಪೈಪ್, ಪಿಪಿಜಿಎಲ್ ರೂಫಿಂಗ್ ಶೀಟ್, ಟಿಎಂಟಿ, ಸಿಮೆಂಟ್ ಶೀಟ್‌ಗಳು, ಟಾಟಾ ರೂಫಿಂಗ್ ಶೀಟ್‌ಗಳು, ಆಂಗ್ಲರ್‌ಗಳು, ಫ್ಲಾಟ್ಸ್, ಸ್ಕ್ವಾರ್ ರಾಡ್, ರೌಂಡ್ ರಾಡ್, ಬೈಟ್ ಫ್ಲಾಟ್ಸ್, ಕ್ಸೆನಾನ್ ರಾಡ್ಸ್ ಸೇರಿದಂತೆ ಎಲ್ಲಾ ತರದ ಹಾರ್ಡ್‌ವೇರ್ ಸಾಮಾಗ್ರಿಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here