ಮಾ.30ರಂದು ಸರ್ವೆ ರಕ್ತೇಶ್ವರಿ ಕಟ್ಟೆಯ ಬಳಿ 11ನೇ ವರ್ಷದ ಆಶ್ಲೇಷ ಬಲಿ – ಆಮಂತ್ರಣ ಬಿಡುಗಡೆ

0

ಪುತ್ತೂರು: ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಸರ್ವೆ ಇದರ ವತಿಯಿಂದ ಮಾ.30ರಂದು ರಕ್ತೇಶ್ವರಿ ಕಟ್ಟೆಯ ಬಳಿ ನಡೆಯುವ ಆಶ್ಲೇಷ ಬಲಿ ಹಾಗೂ ಧಾರ್ಮಿಕ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಸರ್ವೆ ಘಟಕದ ಅಧ್ಯಕ್ಷ ಜಯಂತ್ ಭಕ್ತಕೋಡಿ, ಕಾರ್ಯದರ್ಶಿ ಲಕ್ಷ್ಮೀಶ್ ರೈ, ಬೆಳಿಯಪ್ಪ ಗೌಡ ಸರ್ವೆ, ಪದ್ಮನಾಭ ಗೌಡ, ಮುಂಡೂರು ಗ್ರಾ.ಪಂ ಸದಸ್ಯ ಪ್ರವೀಣ್ ನಾಯ್ಕ್ ನೆಕ್ಕಿತಡ್ಕ, ನವೀನ್ ರೈ , ಯೋಗೀಶ್ ಟಿ, ಗೌತಮ್ ರೈ, ಭರತ್ ಸರ್ವೆ, ಜನಾರ್ಧನ ಸರ್ವೆ, ಜಿತೇಶ್ ಸರ್ವೆ, ಗಣೇಶ್ ಬಿ, ಧನಂಜಯ ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here