ಶಾಂತಿಗೋಡು ಬೀರ್ಮನಕಜೆ ಪ್ರಸಾದ್‌ರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು:ಕೆಲ ದಿನಗಳ ಹಿಂದೆ ವಾಹನ ಅಪಘಾತದಲ್ಲಿ ಮೃತಪಟ್ಟ ಶಾಂತಿಗೋಡು ಗ್ರಾಮದ ಬೀರ್ಮನಕಜೆ ಪ್ರಸಾದ್‌ರವರಿಗೆ ಶ್ರದ್ಧಾಂಜಲಿ ಸಭೆಯು ಮಾ.18ರಂದು ಅವರ ನಿವಾಸದಲ್ಲಿ ನಡೆಯಿತು.


ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ಸಂಚಾಲಕರು ಶ್ರೀಧರ್ ನಾಯ್ಕ ನುಡಿ ನಮನ ಸಲ್ಲಿಸಿದರು.
ಪ್ರಸಾದ್ ಉದ್ಯೋಗ ಹೀರೋ ಹೋಂಡ ಸಂಸ್ಥೆಯ ಸಿಬ್ಬಂದಿ ವರ್ಗದವರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಸಾದ್ ಉದ್ಯೋಗದಲ್ಲಿದ್ದ ಸಂಸ್ಥೆಯಿಂದ ಮತ್ತು ಗೆಳೆಯ ರಿಂದ ಸಂಗ್ರಹವಾದ ಮೊತ್ತವನ್ನು ಇದೇ ಸಂದರ್ಭದಲ್ಲಿ ಪ್ರಸಾದ್ ತಂದೆಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here