ಶಾಂತಿನಗರ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘ-ಅಧ್ಯಕ್ಷ: ದಿನೇಶ್ ಜೇಡರಪಾಲು, ಕಾರ್ಯದರ್ಶಿ: ಸ್ವಾದಿಕ್

0

ಪುತ್ತೂರು: ಕೋಡಿಂಬಾಡಿಯ ಶಾಂತಿನಗರದಲ್ಲಿರುವ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿನೇಶ್ ಜೇಡರಪಾಲು, ಕಾರ್ಯದರ್ಶಿಯಾಗಿ ಸ್ವಾದಿಕ್ ಶಾಂತಿನಗರ ಮತ್ತು ಪದನಿಮಿತ್ತ ಕೋಶಾಧಿಕಾರಿಯಾಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಅವರ ನೇತೃತ್ವದಲ್ಲಿ ಪ್ರೌಢಶಾಲೆಯ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ತುರ್ತು ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜತೆ ಕಾರ್ಯದರ್ಶಿಯಾಗಿ ಹಿತನ್ ಶೆಟ್ಟಿ ಇಡೆಪುಣಿ ಮತ್ತು ಕೀರ್ತನ್ ಗೌಡ ಶಾಂತಿನಗರ ಅವರನ್ನು ಆಯ್ಕೆ ಮಾಡಲಾಗಿದ್ದು ಮುಂದೆ ವಲಯವಾರು ಪ್ರತಿನಿಧಿಗಳಾಗಿ ಉಪಾಧ್ಯಕ್ಷರುಗಳನ್ನು ಮತ್ತು ಕಾರ್ಯಕಾರಿಣಿಗೆ ಸದಸ್ಯರನ್ನು ಆಯ್ಕೆ ಮಾಡಿ ಪದಗ್ರಹಣ ನೆರವೇರಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿಗಳಾದ ಉಮೇಶ್ ಪನಿತೋಟ, ವಸಂತ ಕುಮಾರ್ ಭಟ್ ಪರನೀರು, ರಮೇಶ್ ಪನಿತೋಟ, ಮಹೇಶ್ ಕುಮಾರ್, ಸುಜಿತ್ ಶೆಟ್ಟಿ, ಕೀರ್ತನ್ ಕೆ, ಅವಿನಾಶ್, ನಮೃತೇಶ್, ವಿಜಯ್ ಕುಮಾರ್, ಸುಜಲ್, ಯೋಗೇಂದ್ರ, ಗುರುಪ್ರಸಾದ್ ಅಮೀನ್, ಶರಣು, ವಿಶಾಂತ್ ಡೆಕ್ಕಾಜೆ, ಸುದರ್ಶನ್ ಜೇಡರಪಾಲು, ಸಂದೀಪ್ ಕೆ. ಶಾಂತಿನಗರ, ಪ್ರದೀಪ್ ಕುಮಾರ್ ಬೇರಿಕೆ, ಮುಖೇಶ್ ಜೇಡರಪಾಲು, ಪವಿತ್, ಜಿತೇಶ್. ಕೆ, ಜೀವನ್. ಕೆ, ಅಬ್ದುಲ್ ಮಜೀದ್, ಚಂದನ್ ಕೆ. ಪೂಜಾರಿ, ಮುಖೇಶ್ ಅಮೀನ್, ರೋಹಿತ್ ಕುಮಾರ್, ಮೋಹಮ್ಮದ್ ಅಶದ್, ರಂಶಾದ್ ಮತ್ತಿತರರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here