ಉಪ್ಪಿನಂಗಡಿ: ಬಂದಾರಿಗೆ ಬಂದ ಕಾಡಾನೆಗಳು

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮಕ್ಕೆ ಕಾಡಾನೆಗಳು ಲಗ್ಗೆಯಿಟ್ಟ ಘಟನೆ ಮಾ.23ರಂದು ರಾತ್ರಿ ನಡೆದಿದೆ.
ರಾತ್ರಿ ಎಂಟರ ಸುಮಾರಿಗೆ ಆನೆ ಘೀಳಿಡುವ ಶಬ್ದ ಮುಳುಗುತಜ್ಞ ಮುಹಮ್ಮದ್ ಬಂದಾರು ಅವರ ತೋಟದಲ್ಲಿ ಕೇಳಿ ಬಂದಿದ್ದು, ಬಳಿಕ ಅಲ್ಲಿಂದ ಆನೆ ಮುಂದಕ್ಕೆ ಸಾಗಿ ಬಟ್ಲಡ್ಕದ ಅಬೂಬಕ್ಕರ್ ಅವರ ತೋಟದಲ್ಲಿ ಕಾಣಿಸಿಕೊಂಡಿವೆ. ಇಲ್ಲಿ ಎರಡು ಆನೆಗಳಿವೆ ಎನ್ನಲಾಗುತ್ತಿದೆ. ಸುದ್ದಿ ತಿಳಿದು ಭಯಭೀತರಾದ ಪರಿಸರದ ಮನೆ ಮಂದಿ ಅಲ್ಲಿ ಜಮಾಯಿಸಿದ್ದು, ಆದರೆ ಆನೆಗಳು ಆ ಸಂದರ್ಭದಲ್ಲಿ ಅಲ್ಲಿಂದ ಮರೆಯಾಗಿವೆ. ಆದರೂ ಊರವರಿಂದ ಟಾರ್ಚ್ ಬೆಳಗಿಸಿ, ಬೊಬ್ಬೆ ಹಾಕುತ್ತಾ ಆನೆಗಳು ದೂರ ಹೋಗುವ ಹಾಗೆ ಮಾಡುವ ಪ್ರಯತ್ನಗಳು ನಡೆದಿವೆ. ಈವರೆಗೆ ಕೃಷಿಗೆ ಯಾವುದೇ ಹಾನಿ ಮಾಡಿದ ಬಗ್ಗೆ ವರದಿಯಾಗಿಲ್ಲ.

LEAVE A REPLY

Please enter your comment!
Please enter your name here