ಉಪ್ಪಿನಂಗಡಿ: ಇಂದು ಶ್ರೀ ಮಾಧವ ಶಿಶು ಮಂದಿರ ಆಶ್ರಯದಲ್ಲಿ 17ನೇ ವರ್ಷದ ಗಂಗಾಪೂಜೆ, ಮಾತೃಸಂಗಮ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಮಾತೃ ಮಂಡಳಿ ಉಪ್ಪಿನಂಗಡಿಯ ಸಾರಥ್ಯದಲ್ಲಿ 17ನೇ ವರ್ಷದ ಪವಿತ್ರ ಗಂಗಾಪೂಜೆ, ಮಾತೃಸಂಗಮ ಕಾರ್ಯಕ್ರಮವು ಇಂದು (ಮಾ.24) ನಡೆಯಲಿದೆ.

ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದಲ್ಲಿ ಸಂಜೆ 5ರಿಂದ ಗಂಗಾಪೂಜೆ ನಡೆಯಲಿದ್ದು, ಈ ಬಾರಿ ಬದಲಾದ ನೇತ್ರಾವತಿ ನದಿಯ ಸ್ಥಿತಿಗತಿಯಿಂದಾಗಿ ನದಿದಂಡೆಯಲ್ಲಿ ಮಹಾಕಾಳಿ ದೇವಾಲಯದ ಮುಂಭಾಗದಲ್ಲಿ ಆಕರ್ಷಕವಾಗಿ ನಿರ್ಮಿಸಲಾದ ಅಟ್ಟಳಿಕೆಯಲ್ಲಿ ಗಂಗಾರತಿಯನ್ನು ನಡೆಸಲಾಗುತ್ತಿದೆ. ಪೂಜೆಯಲ್ಲಿ ಭಾಗಿಯಾದ ಮಂದಿಗೆ ಹಣತೆಗಳನ್ನು ಗಂಗೆಗೆ ಸಮರ್ಪಿಸಲು ಅವಕಾಶವಿರುವುದು. ಈ ಸಂದರ್ಭ ಉದ್ಯಮಿ ಬೇಬಿ ಎಸ್. ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರಸೇವಿಕ ಸಮಿತಿಯ ಶಾರೀರಿಕ್ ಪ್ರಮುಖ್ ಕುಮಾರಿ ಶಿಲ್ಪಾ ಭಾರ್ಗವ ಆಚಾರ್ಯ ರವರ ಉಪಸ್ಥಿತಿಯಲ್ಲಿ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here