ಕುತ್ಯಾಳ ಹೊಸಮನೆ ತರವಾಡು ಕುಟುಂಬದ ಪ್ರಶಾಂತ್ ಕುಮಾರ್ ರೈ ಕಲ್ಲಡ್ಕ ನಿಧನ

0

ಪುತ್ತೂರು: ಕುತ್ಯಾಳ ಹೊಸಮನೆ ತರವಾಡು ಕುಟುಂಬದವರಾದ, ಕರ್ನಾಟಕ ಕೇರಳ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಕಲ್ಲಡ್ಕ ನಿವಾಸಿ ಆನಂದ ರೈ ಅವರ ಪುತ್ರ ಪ್ರಶಾಂತ್ ಕುಮಾರ್ ರೈ (43ವ) ಅವರು ಮಾ.24ರಂದು ನಿಧನರಾದರು.

ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಶಾಂತ್‌ಕುಮಾರ್ ರೈ ಅವರು ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದ ಸಮಸ್ಯೆಗೊಳಗಾಗಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಕಿಡ್ನಿಕಸಿ ಮಾಡಿಸಿಕೊಂಡಿದ್ದ ಅವರಿಗೆ ಕೆಲ ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ಪ್ರಶಾಂತ್‌ಕುಮಾರ್ ರೈ ಅವರು ತಂದೆ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ನೇಮೋತ್ಸವ ಮುಂದೂಡಿಕೆ
ಪ್ರಶಾಂತ್ ಕುಮಾರ್ ರೈ ಅವರ ನಿಧನದ ಹಿನ್ನಲೆಯಲ್ಲಿ ಪಡುವನ್ನೂರು ಗ್ರಾಮದ ಕುತ್ಯಾಳ ಹೊಸಮನೆಯಲ್ಲಿ ಮಾ.30 ಮತ್ತು 31ರಂದು ನಡೆಯಬೇಕಿದ್ದ ಕುಟುಂಬ ದೈವಗಳ ನೇಮೋತ್ಸವವನ್ನು ಮುಂದೂಡಲಾಗಿದೆ.

LEAVE A REPLY

Please enter your comment!
Please enter your name here