ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾ.24 ರಂದು ಸಂಜೆ ಬೊಳ್ವಾರು ಮಹಾವೀರ ವೆಂಚರ್ಸ್ ನ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ  ಭಾರತರತ್ನ ಎಂ.ಎಸ್ ಸುಬ್ಬುಲಕ್ಷ್ಮೀರವರ ಮರಿಮಕ್ಕಳು, ಸಂಗೀತ ರತ್ನಾಕರ ಡಾ.ರಾಧಾ ವಿಶ್ವನಾಥನ್ ರವರ ಮೊಮ್ಮಕ್ಕಳು, ಡಿವೈನ್ ಡ್ಯುಯೆಟ್ ಸಹೋದರಿಯರಾದ ಎಸ್.ಐಶ್ವರ್ಯ ಮತ್ತು ಕು|ಎಸ್. ಸೌಂದರ್ಯರವರು ಸುಶ್ರಾವ್ಯವಾಗಿ ಗಾಯನವನ್ನು ನಡೆಸಿಕೊಟ್ಟರು. ವಯೊಲಿನ್ ನಲ್ಲಿ ವಿದ್ವಾನ್ ಜನಾರ್ದನ್ ಶ್ರೀನಾಥ್, ಮೃದಂಗದಲ್ಲಿ ವಿದ್ವಾನ್ ಫಣೀಂದ್ರ ಭಾಸ್ಕರರವರು ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಡಾ.ಅಶೋಕ್ ಪಡಿವಾಳ್ ಮತ್ತು ಕುಟುಂಬಸ್ಥರು ವಹಿಸಿಕೊಂಡಿದ್ದರು‌.  ಮಹಾಬಲ-ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here