ಶಾಂತಿಗೋಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಯಕ್ಷಗಾನ ಬಯಲಾಟ

0

ಪುತ್ತೂರು: ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.2ರಂದು ರಾತ್ರಿ ವೀರಮಂಗಲ ಪಿ.ಎಂ.ಶ್ರೀ ಸರಕಾರಿ ಹಿ.ಪ್ರಾ ಶಾಲಾ ಬಾಲಕಲಾವಿದರಿಂದ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ನಡೆಯಿತು.

ಮುಖ್ಯಗುರು ತಾರನಾಥ ಸವಣೂರು ನಿರ್ದೇಶನದಲ್ಲಿ, ಶಾಂತಿಗೋಡು ವಿಷ್ಣುನಗರ ಸಂಧ್ಯಾಕೃಷ್ಣರವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಬಯಲಾಟ ನಡೆಯಿತು. ಅಯ್ಯಪ್ಪ ಭಜನಾ ಮಂಡಳಿ ಪಜಿರೋಡಿ ಶಾಂತಿಗೋಡು ಇವರಿಂದ ಕುಣಿತ ಭಜನೆ, ಶಾಂತಿಗೋಡು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀದುರ್ಗಾ ಮಹಿಳಾ ಭಜನಾಮಂಡಳಿ ಕೂಡುರಸ್ತೆ ಶಾಂತಿಗೋಡು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಜಾತ್ರಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ತೋಟ, ಆಡಳಿತ ಸಮಿತಿ ಮೊಕ್ತೇಸರ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಸಂಘಟಕ ಸಂಧ್ಯಾಕೃಷ್ಣ ವಿಷ್ಣುನಗರ ಶಾಂತಿಗೋಡು ಮತ್ತಿತರರು ಕಲಾತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here