ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸ್ಥಾಪನಾ ದಿನ

0

ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಎ.6ರಂದು ಬಿಜೆಪಿ ಸ್ಥಾಪನಾ ದಿನ ಆಚರಿಸಲಾಯಿತು. ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿರುವ ಪುತ್ತೂರು ಬಿಜೆಪಿ ಪ್ರಭಾರಿ ಸುನೀಲ್ ಆಳ್ವಾ ಅವರು ಮಾತಾನಾಡಿ ಜನಸಂಘದ ಹಿರಿಯರ ತ್ಯಾಗ ಬಲಿದಾನ ಮತ್ತು 1980ರ ನಂತರ ಬಿಜೆಪಿಯ ಏಳುಬೀಳುಗಳ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ ಭಟ್,ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನೀವಾಸ್ ರಾವ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಉಮೇಶ್ ಕೋಡಿಬೈಲ್, ಪ್ರಸನ್ನ ಮಾರ್ತ, ಸಂತೋಷ್ ಕೈಕಾರ, ಸುರೇಶ್ ಕಣ್ಣರಾಯ, ಅನಿಲ್ ತೆಂಕಿಲ, ಸೀತರಾಮ ರೈ, ಗಣೇಶ್, ಗೋವರ್ಧನ್, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here