ಸವಣೂರಿನಲ್ಲಿ ‘ಸುದ್ದಿ’ ಚಾನೆಲ್ ನ ಮತಸಮರ 2024, ದ. ಕ ಲೋಕ ಸಂಚಾರ

0

ಸವಣೂರು: ಸುದ್ದಿ ಚಾನೆಲ್ ನ ವತಿಯಿಂದ ಮತಸಮರ 2024 ದ. ಕ ಲೋಕಸಮರ ಎನ್ನುವ ವಿಶೇಷ ಕಾರ್ಯಕ್ರಮ ಸವಣೂರು ಪೇಟೆಯಲ್ಲಿ ನಡೆಯಿತು.

ಎ. 6ರಂದು ಸವಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.
ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ,ಕಾಂಗ್ರೆಸ್ ಮುಖಂಡ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಹಾಗೂ ಲೋಕಸಭಾ ಚುನಾವಣೆಯ ಸುಳ್ಯ ಕ್ಷೇತ್ರ ಸಹಸಂಚಾಲಕ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ,ಎಸ್.ಡಿ.ಪಿ.ಐ ಮುಖಂಡ ,ಸವಣೂರು ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್ ಕೆನರಾ ತಮ್ಮ ತಮ್ಮ ಪಕ್ಷಗಳ ವಿಚಾರಧಾರೆ ಹಾಗೂ ಚುನಾವಣೆಯ ಕುರಿತಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಕಾರ್ಯಕರ್ತರಾದ ವೆಂಕಪ್ಪ ಗೌಡ ಅಡೀಲು,ಇಬ್ರಾಹಿಂ, ಸಾಬು,ಎಸ್‌‌.ಡಿ.ಪಿ.ಐ ಪಕ್ಷದ ಅಶ್ರಫ್ ಜನತಾ,ಬಿಜೆಪಿಯಿಂದ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಪ್ರಾ.ಕೃ.ಪ.ಸ.ಸಂ.ದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಬಿಜೆಪಿ ಸವಣೂರು ವಾರ್ಡ್ 1 ರ ಅಧ್ಯಕ್ಷ ಪ್ರಜ್ವಲ್ ಕೆ.ಆರ್,ಮುಂಡೂರು ಗ್ರಾ.ಪಂ.ಸದಸ್ಯ ಪ್ರವೀಣ್ ನೆಕ್ಕಿತಡ್ಕ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡರು.

ಭ್ರಷ್ಟಾಚಾರ ವಿರೋಧಿ ಜನ ಜಾಗೃತಿ- ಪ್ರತಿಜ್ಞಾ ವಿಧಿ

ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಆರಂಭಿಸಲಾಗಿರುವ ಭ್ರಷ್ಟಾಚಾರ ವಿರೋಧಿ ಜನ ಜಾಗೃತಿಗೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು

LEAVE A REPLY

Please enter your comment!
Please enter your name here