ಉಪ್ಪಿನಂಗಡಿ: ಗೃಹರಕ್ಷಕ ದಳದ ಕಚೇರಿಗೆ ಭೋಧಕರ ಭೇಟಿ

0

ಉಪ್ಪಿನಂಗಡಿ: ಪೊಲೀಸ್ ಮಹಾನಿರ್ದೇಶಕರು ಹಾಗೂ ಗೃಹ ರಕ್ಷಕದಳದ ಮಹಾ ಸಮಾದೇಷ್ಟರ ಕೇಂದ್ರ ಕಚೇರಿ ಬೆಂಗಳೂರು ಇಲ್ಲಿಂದ ದ.ಕ. ಜಿಲ್ಲಾ ಕಚೇರಿಗೆ ನಿಯುಕ್ತಿಗೊಂಡ ಭೋಧಕ ಮಹೇಶ್ ಅವರು ಉಪ್ಪಿನಂಗಡಿ ಗೃಹ ರಕ್ಷಕದಳದ ವಾರದ ಕವಾಯತಿಗೆ ಭೇಟಿ ನೀಡಿ ಕವಾಯತು ನಡೆಸಿಕೊಟ್ಟರು.

ಈ ಸಂದರ್ಭ ಚುನಾವಣಾ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದ ಅವರು, ಗೃಹ ರಕ್ಷಕರಿಗೂ ಅಂಚೆ ಮತದಾನದ ವ್ಯವಸ್ಥೆ ಇರುವ ಬಗ್ಗೆ ತಿಳಿಸಿದರಲ್ಲದೆ, ಚುನಾವಣೆಯಲ್ಲಿ ಗೃಹ ರಕ್ಷಕರು ಜಿಲ್ಲೆ, ಹೊರ ಜಿಲ್ಲೆ, ಅಥವಾ ಹೊರ ರಾಜ್ಯಗಳಲ್ಲೂ ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿರುವಂತೆ ಆದೇಶಿಸಿದರು.
ಗೃಹರಕ್ಷಕದಳದ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಅವರು ಭೋಧಕ ಮಹೇಶ್ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ.ಎಸ್.ಎಲ್. ಜನಾರ್ದನ ಆಚಾರ್ಯ, ಅಣ್ಣು ಬಿ., ಗೊಪಾಲ್ ಕೆ. ಹಾಗೂ ಘಟಕದ 20 ಹೆಚ್ಚು ಗೃಹರಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here