ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರ್ಕುಂಜ ಬಾರಿಕೆ ಕುಟುಂಸ್ಥರಿಂದ ಹೊರೆಕಾಣಿಕೆ

0

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ 20ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಅನ್ನಸಂತರ್ಪಣೆಗೆ ಕರ್ಕುಂಜ ಬಾರಿಕೆ ತರವಾಡು ಮನೆ ಕುಟುಂಬಸ್ಥರು ಏ.9ರಂದು ಹಸಿರು ಹೊರೆಕಾಣಿಕೆ ಸಮರ್ಪಿಸಿದರು.

ತರವಾಡಿನ ಕುಟುಂಬಸ್ಥರಿಂದ ಸಂಗ್ರಹಿಸಲಾದ ಹಸಿರುವಾಣಿಯನ್ನು ಕರ್ಕುಂಜ ಬಾರಿಕೆ ತರವಾಡು ಮನೆಯಿಂದ ವಾಹನಗಳ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ತರವಾಡು ಮನೆ ಮುಖ್ಯಸ್ಥರು ಸೇರಿದಂತೆ ನೂರಾರು ಮಂದಿ ಕುಟುಂಬಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here