ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಯುಗಾದಿಯಂದು ವಿಶೇಷ ಪೂಜೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಚಾಂದ್ರಮಾನ ಯುಗಾದಿ ಅಂಗವಾಗಿ ರಾತ್ರಿ ಪೂಜೆ, ವಸಂತ ಪೂಜೆ, ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಡಾ. ಎಂ. ರತ್ನಾಕರ ಶೆಣೈ, ಯು. ನಾಗರಾಜ ಭಟ್, ಕೆ. ಅನಂತರಾಯ್ ಕಿಣಿ, ಕೆ. ದೇವಿದಾಸ ಭಟ್ ಪ್ರಮುಖರಾದ ಕರಾಯ ಗಣೇಶ ನಾಯಕ್, ಹರೀಶ ಪೈ, ವೆಂಕಟೇಶ್ ಕಿಣಿ, ಹರೀಶ ಕಿಣಿ, ಎಂ. ಎಸ್. ಭಟ್ ಲಕ್ಷ್ಮೀನಗರ, ಪಣಕಜೆ ಪ್ರಸಾದ್ ಶೆಣೈ, ನರಸಿಂಹ ಪಡಿಯಾರ್, ವೈ. ವೆಂಕಟೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಪುರೋಹಿತರಾದ ಪಿ.ನರಸಿಂಹ ಭಟ್, ಅರ್ಚಕರಾದ ರವೀಂದ್ರ ಭಟ್, ಸಂದೀಪ್ ಭಟ್, ಸುಬ್ರಹ್ಮಣ ಭಟ್ ಪೂಜಾ ವಿಧಿ-ವಿಧಾನವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here