ಮಂಗಳೂರು ಪತ್ರಿಕಾ ಏಜೆಂಟ್ ಆಗಿದ್ದ ವಿಟ್ಲ ಸೋಮಪ್ಪ ಮೂಲ್ಯ ನಿಧನ

0

ಮಂಗಳೂರು:ಮಂಗಳೂರುನಲ್ಲಿ ಪತ್ರಿಕಾ ಏಜೆಂಟರಾಗಿದ್ದು ದ.ಕ.ಜಿಲ್ಲೆಯಲ್ಲಿ ಸುದ್ದಿ ಬಿಡುಗಡೆ ಸಹಿತ ಹಲವು ಪತ್ರಿಕೆಗಳಿಗೆ ಮಾರಾಟ ಉತ್ತೇಜಕರಾಗಿ ಸೇವೆ ಸಲ್ಲಿಸಿದ್ದ ವಿಟ್ಲ ಕಸ್ಬಾ ನಿವಾಸಿ ಸೋಮಪ್ಪ ಮೂಲ್ಯ ಕಟ್ಟೆ (77ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.11ರಂದು ನಿಧನರಾದರು.


ಧಾರ್ಮಿಕ, ಸಾಮಾಜಿಕ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸೋಮಪ್ಪ ಮೂಲ್ಯ ಅವರು ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕ ಸದಸ್ಯರಾಗಿ ಹಲವಾರು ವರ್ಷಗಳ ಕಾಲ ದುಡಿದಿದ್ದರು. ಗುಜರಾತ್‌ನ ಅಮುಲ್ ಸಂಸ್ಥೆಯಲ್ಲಿ ಕೆಲ ವರ್ಷಗಳ ಕಾಲ ಉದ್ಯೋಗದಲ್ಲಿದ್ದರು.ಮಂಗಳೂರುನಲ್ಲಿ ಪತ್ರಿಕಾ ಏಜೆಂಟರಾಗಿದ್ದ ಅವರು ಮುಂಗಾರು, ಸುದ್ದಿ ಬಿಡುಗಡೆ, ಸಂಯುಕ್ತ ಕರ್ನಾಟಕ , ಪ್ರಜಾವಾಣಿ ಪತ್ರಿಕೆಗಳಲ್ಲಿ ಮಾರಾಟ ಉತ್ತೇಜಕರಾಗಿ ಹಲವಾರು ವರ್ಷಗಳ ಕಾಲ ದುಡಿದಿದ್ದರು.
ಮೂಲತ: ವಿಟ್ಲದ ನಿವಾಸಿ ಸೋಮಪ್ಪ ಮೂಲ್ಯ ಕಟ್ಟೆ (ಎಸ್.ಎಂ.ಕಟ್ಟೆ) ಅವರು ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ಮಗಳ ಮನೆಯಲ್ಲಿ ವಾಸವಾಗಿದ್ದರು.ಮೃತರು ಪತ್ನಿ,ಓರ್ವ ಪುತ್ರ ಹಾಗೂ ಓರ್ವ ಪುತ್ರಿ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರವನ್ನು ವಿಟ್ಲದಲ್ಲಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here