ಪ್ರಗತಿಪರ ಕೃಷಿಕ ನಿಡ್ಯಾಳಗುತ್ತು ಶೀನಪ್ಪ ಗೌಡರವರಿಗೆ ಶ್ರದ್ಧಾಂಜಲಿ

0

ಪುಣಚ: ಇತ್ತೀಚಿಗೆ ನಿಧನರಾದ ಪುಣಚ ಗ್ರಾಮದ ನಿವಾಸಿ ಪ್ರಗತಿಪರ ಕೃಷಿಕ ನಿಡ್ಯಾಳಗುತ್ತು ಶೀನಪ್ಪ ಗೌಡರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮೃತರ ಮನೆಯಲ್ಲಿ ಎ.13ರಂದು ನಡೆಯಿತು.


ಪುತ್ತೂರು ಎ.ವಿ.ಜಿ ಅಸೋಸಿಯೇಟ್ಸ್’ನ ಎ.ವಿ ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಮೃತರ ಜೀವನ, ವ್ಯಕ್ತಿತ್ವದ ಬಗ್ಗೆ ನುಡಿ ನಮನ ಸಲ್ಲಿಸಿದರು.
ಪುಣಚ ಗ್ರಾ.ಪಂ. ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರು, ಪುಣಚ ಪ್ರಾ.ವ್ಯ.ಸೇ.ಸಹಕಾರಿ ಸಂಘದ ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ, ಜನ ಪ್ರತಿನಿಧಿಗಳು, ನಿಡ್ಯಾಳಗುತ್ತು ಕುಟುಂಬಸ್ಥರು, ಬಂಧುಗಳು, ಹಲವಾರು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.

ಮೃತರ ಪತ್ನಿ ಕಮಲ, ಪುತ್ರರಾದ ಪುತ್ತೂರು ಮಹಾಲಿಂಗೇಶ್ವರ ಹಾರ್ಡ್’ವೇರ್’ನ ಮಾಲಕ ಜಗನ್ನಾಥ ಗೌಡ, ದಯಾನಂದ ಗೌಡ, ಸೊಸೆಯಂದಿರಾದ ಪ್ರತಿಭಾ ಜಗನ್ನಾಥ, ವಿದ್ಯಾಶ್ರೀ ಪಿ.ಆರ್, ಪುತ್ರಿಯರಾದ ಶೋಭಾಕುಮಾರಿ, ಪ್ರೇಮಲತಾ, ಚಂದ್ರಾವತಿ, ಅಳಿಯಂದಿರಾದ ಭಾಸ್ಕರ ಗೌಡ, ಶಿವರಾಮ್ ಗೌಡ, ಹಾಗೂ ಮೊಮ್ಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.

ಮೌನ ಪ್ರಾರ್ಥನೆ- ಪುಷ್ಪಾರ್ಚನೆ :
ಅಗಲಿದ ನಿಡ್ಯಾಳಗುತ್ತು ಶೀನಪ್ಪ ಗೌಡರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here