ಪಡ್ನೂರು: ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆ 

0

ಬಿಜೆಪಿ ಕಚೇರಿಯಲ್ಲಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಬಿಜೆಪಿ ಅಧ್ಯಕ್ಷರು

ಪುತ್ತೂರು: ಪಡ್ನೂರು ಗ್ರಾಮದ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ವಿಜಯ ಪೂಜಾರಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ವಿಜಯ ಪೂಜಾರಿ ಅವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ವಿಜಯ ಪೂಜಾರಿ ಅವರು ಮಾತನಾಡಿ ಕಾಂಗ್ರೇಸ್ ನಾಯಕರ ವರ್ತನೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಹತ್ತು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಗ್ರಾಮದಲ್ಲಿ  ಆಗದೇ ಇರುವುದರಿಂದ ಬೇಸತ್ತು ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಶಕ್ತೀ ಕೇಂದ್ರ ಪ್ರಮುಖ್ ನಾಗೇಶ್ ಬನ್ನೂರು, ಬನ್ನೂರು ಗ್ರಾ.ಪಂ ಸದಸ್ಯೆ ರಮಣಿ ಗಾಣಿಗ, ಪಕ್ಷದ ಪ್ರಮುಖರಾದ ಮಾಜಿ ಕೌನ್ಸಿಲರ್ ಸತೀಶ್ ನಾನೈಕ್  , ಬಾಲಕೃಷ್ಣ ಜೋಯಿಷ್, ರಾಧಕೃಷ್ಣ, ಗ್ರಾಮಾಂತರ ಮಂಡಲ ಯುವಮೋರ್ಚ ಅಧ್ಯಕ್ಷ ನವೀನ್ ಪಡ್ನೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here