‘ಗಯಾಪದ ಕಲಾವಿದೆರ್ ಉಬಾರ್’ ತಂಡದ ಸೂಪರ್ ಹಿಟ್ ನಾಟಕ-ನಾಳೆ ಮಣಿಕ್ಕಾರ ವಿಷ್ಣುನಗರದಲ್ಲಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲದ ಪ್ರಯುಕ್ತ ʻಮುರಳಿ ಈ ಪಿರ ಬರೊಲಿʼ

0

ಪುತ್ತೂರು: ಬಾಲಕೃಷ್ಣ ಪೂಜಾರಿ ಪೆರುವಾಯಿ ಸಾರಥ್ಯದ, ಕಿಶೋರ್‌ ಜೋಗಿ ಉಬಾರ್‌ ಸಂಚಾಲಕತ್ವದಲ್ಲಿ ʻಗಯಾಪದ ಕಲಾವಿದೆರ್‌ ಉಬಾರ್‌ʼ ನಾಟಕ ತಂಡದ ಈ ವರ್ಷದ ಕಲಾಕಾಣಿಕೆ, ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ಈ ವರ್ಷದ ಸೂಪರ್ ಹಿಟ್ ನಾಟಕ ʻಮುರಳಿ ಈ ಪಿರ ಬರೊಲಿʼ ನಾಟಕವು ಏ. 15 ರಂದು ಮಣಿಕ್ಕಾರ ವಿಷ್ಣುನಗರದಲ್ಲಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲದ ಪ್ರಯುಕ್ತ ನಡೆಯಲಿದೆ.


ಶಶಿಕುಮಾರ್‌ ಕೂಳೂರು ಇವರು ರಚಿಸಿ ನಿರ್ದೇಶನ ಮಾಡಿರುವ ಈ ನಾಟಕಕ್ಕೆ ಕಾರ್ತಿಕ್‌ ಶಾಸ್ತ್ರಿ ಮಣಿಲ ಪುಣಚ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜೇಶ್‌ ಶಾಂತಿನಗರರವರ ಸಲಹೆ ಸಹಕಾರದಲ್ಲಿ, ಲಿತು ಸೌಂಡ್ಸ್‌ & ಲೈಟ್ಸ್‌ ಧ್ವನಿ ಬೆಳಕಿನಲ್ಲಿ, ಸಿದ್ದು ಬೆದ್ರರವರ ರಂಗಾಲಂಕಾರ, ಪ್ರದೀಪ್ ಕಾವುರವರ ವರ್ಣಾಲಂಕಾರ, ಗುಣಕರ ಅಗ್ನಾಡಿಯವರ ಸಹಕಾರ, ದಿವಾಕರ ಸುರ್ಯ ಮತ್ತು ಕಿಶನ್‌ ಶೆಟ್ಟಿ ಸುರ್ಯ ರವರ ಸಮಗ್ರ ನಿರ್ವಹಣೆಯಲ್ಲಿ ನಾಟಕ ಮೂಡಿಬರಲಿದೆ.


ರಂಗ ಕಲಾವಿದರಾಗಿ ಗಂಗಾಧರ ಟೈಲರ್‌ ಉಬಾರ್‌, ರಾಜೇಶ್‌ ಶಾಂತಿನಗರ, ಕೀಶೋರ್‌ ಜೋಗಿ ಉಬಾರ್‌, ರಂಗಯ್ಯ ಬಲ್ಲಾಳ್‌ ಕೆದಂಬಾಡಿಬೀಡು, ರಾಜಶೇಖರ ಶಾಂತಿನಗರ, ದಿವಾಕರ ಸುರ್ಯ, ಸತೀಶ್‌ ಶೆಟ್ಟಿ ಹಿರೇಬಂಡಾಡಿ, ಅನಿಲ್‌ ಇರ್ದೆ, ಸುನಿಲ್ ಪೆರ್ನೆ, ಸಂಧ್ಯಾ ಹಿರೇಬಂಡಾಡಿ, ಅನೀಶ್ ನೆಕ್ಕಿಲಾಡಿ, ಉದಯ್‌ ಪುತ್ತೂರು, ಚೇತನ್‌ ಪಡೀಲ್, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಅನುಷಾ ಜೋಗಿ ಪುರುಷರಕಟ್ಟೆ ಅಭಿನಯಿಸಲಿದ್ದಾರೆ.

LEAVE A REPLY

Please enter your comment!
Please enter your name here