ಅರಿಯಡ್ಕ: ಶೇಖಮಲೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0

ಪುತ್ತೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ 422 ಮಹಿಳಾ ಒಕ್ಕೂಟ, ಗ್ರಾಮ ಸಮಿತಿ ಅರಿಯಡ್ಕ ಶೇಖಮಲೆ ಇದರ ವತಿಯಿಂದ ಸವಿಂದಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆಯನ್ನು ಶೇಖಮಲೆ ಕಾಲನಿಯಲ್ಲಿ ಆಚರಿಸಲಾಯಿತು.

ಸಂಘಟನೆಯಾ ಗೌರವಾಧ್ಯಕ್ಷ ಕೇಶವ ರವರು ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘಟನೆಯ ಖಜಾಂಚಿ ಸತೀಶ್. ಎಸ್ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ, ಮಹಿಳಾ ಒಕ್ಕೂಟದ ಶಶಿಕಲಾ ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಸರ್ವ ಸದಸ್ಯರು ,ಮಹಿಳಾ ಒಕ್ಕೂಟದವರು ಉಪಸ್ಥಿತರಿದ್ದರು. ನಾರಾಯಣ. ಎಸ್ ವಂದಿಸಿ, ಲೋಕೇಶ್. ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here