ಪುಣಚ ಬರೆಂಜದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ- ಕಾರ್ಮಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

0

ಪುತ್ತೂರು: ಪುಣಚ ಗ್ರಾ.ಪಂ ವ್ಯಾಪ್ತಿಯ ಬರೆಂಜ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಸ್ಲಾಬ್ ಕುಸಿದು ಕಾರ್ಮಿಕರು ಗಾಯಗೊಂಡಿರುವ ಘಟನೆ ಎ.15ರಂದು ನಡೆದಿದೆ.


ಪುಣಚದಿಂದ ಬರೆಂಜ, ನಿಡ್ಯಾಳ, ಕುರುಡಕಟ್ಟೆ ಮೂಲಕ ಬಲ್ನಾಡು ರಸ್ತೆಯ ಬರೆಂಜದಲ್ಲಿರುವ ತೋಡಿಗೆ ಕಳೆದ ಆರು ತಿಂಗಳುಗಳಿಂದ ಸೇತುವೆ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ. ಎ.15ರಂದು ಸೇತುವೆಯ ಸ್ಲಾಬ್ ಹಾಕುವ ಕಾಮಗಾರಿ ನಡೆಯುತಿತ್ತು. ಸುಮಾರು20 ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಸೇತುವೆಯ ಸ್ಲಾಬ್ ಕುಸಿದು ಬಿದ್ದು ಅದರ ಅಡಿ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ.ಗಾಯಗೊಂಡವರಲ್ಲಿ ಮಹೇಶ್(52), ವಿಜಯ್‌ ಸರ್ವೆ(32),ನಾಗರಾಜ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮ್ಯಾಥನ್(40)‌, ಯೂಸುಫ್‌(50), ಅಕ್ತರ್‌ ಉಲ್ಲಾ(50) ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪುಣಚ ಗ್ರಾ.ಪಂ ಅಧ್ಯಕ್ಷ ಬೇಬಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಪಿಡಿಓ ರವಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here