ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮಾಹಿತಿ‌‌ ಕೇಂದ್ರ ಉದ್ಘಾಟನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಗೆ ಸಂಬಂಧಿಸಿ ಎ.16 ರಿಂದ 17 ರ ತನ‌ಕ ದೇವಳದ ಸೋಪಾನ ಮಂಟಪದಲ್ಲಿ ನಡೆಯುವ ಮಾಹಿತಿ ಕೇಂದ್ರವನ್ನು ಎ.16 ರಂದು ಉದ್ಘಾಟಿಸಲಾಯಿತು.


ರಾಜ್ಯ ಧಾ‌ರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರು ದೀಪ ಪ್ರಜ್ವಲಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರು ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್, ಮಾಹಿತಿ ಕೇಂದ್ರದ ಉದ್ಘೋಕ್ಷರಾದ ನಿರಂಜನ ರೈ ಮಠಂತಬೆಟ್ಟು, ರಾಜೇಶ್ ಬನ್ನೂರು, ಗಿರೀಶ್, ನೇಮಕ್ಷಾ ಸುವರ್ಣ ಅವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here