ಬಿಜೆಪಿಯಿಂದ ಮನೆ ಮನೆ ಭೇಟಿ ಮಹಾ ಅಭಿಯಾನ

0

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಜೆಪಿಯಿಂದ 221 ಬೂತ್‌ಗಳಲ್ಲೂ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಜೊತೆಯಾಗಿ ಮನೆ ಮನೆ ಭೇಟಿ ಮಹಾ ಅಭಿಯಾನ ಎ.21ರಂದು ನಡೆಸುತ್ತಿದ್ದಾರೆ.


ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರವಾಸವಾದ ಬಳಿಕ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು ಮತ್ತು ಸಹಕಾರಿ ಸಂಘದ ನಿರ್ದೇಶಕರೊಂದಿಗೆ ಚುನಾವಣಾ ಪ್ರಚಾರ ಪೂರ್ಣಗೊಂಡಿದೆ. ಬೂತ್‌ಗಳಲ್ಲಿ ಈಗಾಗಲೇ ಒಂದು ಬಾರಿ ಎಲ್ಲಾ ಮನೆ ಮನೆ ಭೇಟಿ ನಡೆದಿದೆ. ಇದಕ್ಕೆ ಪೂರಕವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ 221 ಬೂತ್‌ಗಳಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಮನೆ ಮನೆ ಮಹಾ ಅಭಿಯಾನ ನಡೆಯಲಿದೆ.


ಆರ್ಯಾಪು ಗ್ರಾಮದ ಒಳತ್ತಡ್ಕ ಬೂತ್ ನಂ 111ರಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರ ನೇತೃತ್ವದಲ್ಲಿ ಮನೆ ಮನೆ ಭೇಟಿ ಮಹಾ ಅಭಿಯಾನ ನಡೆಯಿತು. ಬೊಳುವಾರಿನಲ್ಲಿ ಯು ಲೋಕೇಶ್ ಹೆಗ್ಡೆ, ನೀಲಂತ್ ಸಹಿತ ಹಲವಾರು ಮಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಮುಂಡೂರು ಬೂತ್ ಸಂಖ್ಯೆ 189ರಲ್ಲ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯ ಅಶೋಕ್ ಪುತ್ತಿಲ ಸಹಿತ ಹಲವಾರು ಮಂದಿ ಮಹಾ ಅಭಿಯಾನ ನಡೆಸಿದರು.

LEAVE A REPLY

Please enter your comment!
Please enter your name here