ಕೌಕ್ರಾಡಿ: ಬಿಜೆಪಿಯಿಂದ ಮನೆ ಮನೆ ಭೇಟಿ, ಮತಯಾಚನೆ

0

ನೆಲ್ಯಾಡಿ: ಬಿಜೆಪಿ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಎ.21ರಂದು ಕೌಕ್ರಾಡಿ ಬೂತ್ ಸಂಖ್ಯೆ 24ರಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.


ಮತಯಾಚನೆ ವೇಳೆ ಕೇಂದ್ರ ಸರಕಾರದ ಸಾಧನೆಗಳ ಪಟ್ಟಿ, ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಿಚಯ ಪತ್ರವನ್ನು ಮತದಾರರಿಗೆ ನೀಡಿ ಕಾರ್ಯಕರ್ತರು ಮತಯಾಚನೆ ಮಾಡಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯ ಸುಧಾಕರ ಗುತ್ತಿನಮನೆ, ಮಾಜಿ ಸದಸ್ಯ ಪ್ರಸನ್ನ ಗುತ್ತಿನಮನೆ, ಬೂತ್ ಸಮಿತಿ ಅಧ್ಯಕ್ಷ ಕೀರ್ತಿಪ್ರಸಾದ್, ಕಾರ್ಯಕರ್ತರಾದ ಸಂತೋಷ್ ಆಟೋ, ಮೋಹನ ಕಟ್ಟೆಮಜಲು, ಜಗದೀಶ್, ದಿನೇಶ್, ಸದಾನಂದ, ರಾಜಶೇಖರ್, ಯಶೋಧರ, ಹರೀಶ, ವಿನಯ್ ಮತ್ತಿತರರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here