ನೆಲ್ಯಾಡಿ ಪಡುಬೆಟ್ಟು ಬೂತ್‌ನಲ್ಲಿ ಮಹಾಸಂಪರ್ಕ ಅಭಿಯಾನ

0

ನೆಲ್ಯಾಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೂತ್ 22ರಲ್ಲಿ ಎ.21ರಂದು ನಡೆಯಿತು.
ನೆಲ್ಯಾಡಿ ಗ್ರಾಮದ ರಾಮನಗರ ಮತ್ತು ಬೊನ್ಯಸಾಗು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಪರ ಮತಯಾಚಿಸಿದರು. ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ ರಾಮನಗರ, ಬೂತ್ ಅಧ್ಯಕ್ಷರಾದ ಕುಶಾಲಪ್ಪ ಮರ್ವೋಡಿ, ಬೂತ್ ಕಾರ್ಯದರ್ಶಿ ಚಂದ್ರಶೇಖರ ರೈ, ಬೂತ್ ಪ್ರಭಾರಿ ಸುಂದರ ಗೌಡ ಅತ್ರಿಜಾಲು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ, ಬಿಜೆಪಿಯ ಪ್ರಮುಖರು, ಮಹಿಳಾ ಪ್ರಮುಖರು, ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here