ಕೆಮ್ಮಾಯಿ ಭರತಪುರದಲ್ಲಿ ಪಂಚಮುಖಿ ಹನುಮಾನ್ ದೇವರ ಮೂರ್ತಿ ಪ್ರತಿಷ್ಠೆ, ಸತ್ಯದೇವತೆ ಕಲ್ಲುರ್ಟಿ ದೈವದ ಪುನಃಪ್ರತಿಷ್ಠಾಪನೆ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕ – ಹನುಮದೋಪಾಸಕ ಡಾ| ರಾಮಚಂದ್ರ ಗುರೂಜಿಯವರ ಶುಭಾಶೀರ್ವಾದದೊಂದಿಗೆ, ಏಕ ಜಾತಿ ಧರ್ಮ ಪೀಠಾಧೀಶ್ವರರಾದ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀಪಂಚಮುಖಿ ಹನುಮಾನ್ ದೇವರ ಮೂರ್ತಿ ಪ್ರತಿಷ್ಠೆ ಹಾಗೂ ಶ್ರೀಸತ್ಯದೇವತೆ ಕಲ್ಲುರ್ಟಿ ಚಾವಡಿಯಲ್ಲಿ ಶ್ರೀಸತ್ಯದೇವತೆ ಕಲ್ಲುರ್ಟಿ ದೈವದ ಪುನಃಪ್ರತಿಷ್ಠಾಪನೆ ದೇವದಾಸ್ ತಂತ್ರಿ ಮುಂಬೈರವರ ನೇತೃತ್ವದಲ್ಲಿ ತಾಂತ್ರಿಕ ವೈದಿಕ ಕಾರ್ಯಕ್ರಮಗಳೊಂದಿಗೆ ಏ.26ರಂದು ನಡೆಯಿತು.


ಏ.25 ರಂದು ಸಂಜೆ 6.30ಕ್ಕೆ ಸ್ವಸ್ತಿ ಪುಣ್ಯಾಹ, ದೀಪ ಪ್ರಜ್ವಲನೆ, ವಾಸ್ತು ರಾಕ್ಷೋಘ್ನ, ಆದಿವಾಸ, ಏ.26ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಪ್ರತಿಷ್ಠಾ ಹೋಮ, ಮೂರ್ತಿ ಪ್ರತಿಷ್ಠಾಪನೆ, ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಭರತಪುರ ಶ್ರೀಪಂಚಮುಖಿ ಹನುಮಾನ್ ಉತ್ಸವ ಸಮಿತಿ ಗೌರವಾಧ್ಯಕ್ಷ ಚಿದಾನಂದ ರೈ ಕೊಪ್ಪಳ, ಅಧ್ಯಕ್ಷ ಪ್ರವೀಣ್ ನಾಕ್, ಕಾರ್ಯಾಧ್ಯಕ್ಷ ಮಂಜುನಾಥ ಎಂ. ಕೆಮ್ಮಾಯಿ, ಕಾರ್ಯದರ್ಶಿ ಚೇತನ್ ಕುಮಾರ್, ಗೌರವ ಸಂಚಾಲಕರಾದ ಸುಧಾಕರ ನಾಯ್ಕ್ ಕೆಮ್ಮಾಯಿ, ಪ್ರವೀಣ್ ನಾಯ್ಕ್, ಸುರೇಂದ್ರ ಪೂಜಾರಿ, ಗೌರವ ಸಲಹೆಗಾರ ಬೊಮ್ಮಯ್ಯ ಬಂಗೇರ ಮುಗ್ಗ, ಉಪಾಧ್ಯಕ್ಷರಾದ ನಾಗೇಶ್, ಸಂತೋಷ್ ಶೆಟ್ಟಿ ಬಡಾವು, ಕೋಶಾಧಿಕಾರಿ ದಿಲೀಪ್ ಕುಮಾರ್, ನಿರ್ದೇಶಕರುಗಳಾದ ಕೃಷ್ಣಪ್ಪ ಶಿನಗರ, ಮೋಹನ ಸಿಂಹವನ, ಶ್ರಿಧರ ಮಡಿವಾಳ, ಕುಸುಮಾವತಿ, ಶೊಭಾ, ಸದಸ್ಯರುಗಳಾದ ವಿಜಯ ಕುಮಾರ್ ಬುಳೇರಿಕಟ್ಟೆ, ಸುರೇಶ್ ಮಡಿವಾಲ, ರವಿ, ಶಮನ್ ಆಚಾರ್ಯ, ಸರಸ್ವತಿ ಬನ್ನೂರು, ಮಮತಾ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here