ಎಸ್‌ಆರ್‌ಕೆ ರಜತ ಸಂಭ್ರಮದ ಕ್ರೀಡಾಕೂಟ, ಕಾರ್ಮಿಕ ದಿನಾಚರಣೆ

0

ಪುತ್ತೂರು: ಎಸ್‌ಆರ್‌ಕೆ ಲ್ಯಾಡರ್‍ಸ್ ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಮೇ 1ರಂದು ಸಂಸ್ಥೆಯ ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ ಮತ್ತು ಕಾರ್ಮಿಕ ದಿನಾಚರಣೆಯು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ಉದ್ಘಾಟನೆಗೊಂಡಿತು.


ಬೆಳಿಗ್ಗೆ ಕ್ರೀಡಾಕೂಟವನ್ನು ರಾಮಕ್ಕ ಟಿ ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಯದುಶ್ರೀ ಆನೆಗುಂಡಿ ಕ್ರೀಡಾಕೂಟದ ಧ್ವಜರೋಹಣ ಮಾಡಿದರು. ಹಿರಿಯ ಕಾರ್ಮಿಕ ನಾರಾಯಣ ನಾಯ್ಕ ತೆಂಗಿನ ಕಾಯಿ ಒಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಎಸ್.ಆರ್.ಕೆ.ಲ್ಯಾಡರ್‍ಸ್‌ನ ಮಾಲಕ ಕೇಶವ ಅಮೈ ಅವರು ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here