ಮೇ.3:ಹಿಂದೂ ರುದ್ರಭೂಮಿಗೆ ರೋಟರಿ ಪುತ್ತೂರುನಿಂದ ವಾಟರ್ ಕೂಲರ್ ಹಸ್ತಾಂತರ

0

ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಹಿಂದೂ ರುದ್ರಭೂಮಿಗೆ ವಾಟರ್ ಕೂಲರ್ ಹಸ್ತಾಂತರಿಸುವ ಕಾರ್ಯಕ್ರಮ ಮೇ.3ರಂದು ಸಂಜೆ ಜರಗಲಿದೆ.
ಅಂತರರಾಷ್ಟ್ರೀಯ ರೋಟರಿಯ ಮಹಾದಾನಿ ಎನಿಸಿಕೊಂಡು ಬೀಕ್ವೆಸ್ಟ್ ಸೊಸೈಟಿ ಮೆಂಬರ್ ಎಂದು ಗುರುತಿಸಿಕೊಂಡಿರುವ ರಾಮಕೃಷ್ಣ ಕೆ.ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ವಾಟರ್ ಕೂಲರ್ ನ ಪ್ರಾಯೋಜಕತ್ವ ವಹಿಸಿಕೊಂಡಿರುವ ಡಾ.ಹರೀಶ್ ಪಿ.ಶೆಣೈ ಹಾಗೂ ಅವರ ಪುತ್ರ ಸಿದ್ಧಾಂತ್ ಹರೀಶ್ ಶೆಣೈರವರು ಭಾಗವಹಿಸಲಿದ್ದಾರೆ ಎಂದು ರೋಟರಿ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ.ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೋಮಶೇಖರ್ ರೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here