ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ವಠಾರದ ಶ್ರೀ ನಾಗದೇವರ ಗುಡಿಗೆ ಶಿಲಾನ್ಯಾಸ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ವನಭೋಜನದಲ್ಲಿ ಶ್ರೀ ನಾಗದೇವರಿಗೆ ನೂತನ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಭೂವರಾಹ ಹೋಮದ ಮೂಲಕ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.


ಕಾಶಿ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಯವರ ಮಾರ್ಗದರ್ಶನದಂತೆ ವೇ.ಮೂ. ರವಿ ಭಟ್ ಬೆಳ್ಮಣ್, ಶ್ರೀ ದೇವಾಲಯದ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್, ಅರ್ಚಕರಾದ ರವೀಂದ್ರ ಭಟ್, ಸಂದೀಪ ಭಟ್ ಧಾರ್ಮಿಕ ವಿದಿ-ವಿಧಾನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಕೆ.ಅನಂತರಾಯ ಕಿಣಿ, ಯು.ನಾಗರಾಜ ಭಟ್, ಪ್ರಮುಖರಾದ ಕರಾಯ ಗಣೇಶ ನಾಯಕ್, ಕರಾಯ ಸತೀಶ ನಾಯಕ್, ಉಪೇಂದ್ರ ಪೈ ನೇಜಿಕಾರ್, ಸುರೇಶ ಪೈ, ನೇಜಿಕಾರ್ ರತ್ನಾಕರ ಪೈ, ಯಂ.ಎಸ್. ಭಟ್ ಲಕ್ಷ್ಮೀನಗರ, ನಿಡ್ಡೋಡಿ ರವಳನಾಥ ಪ್ರಭು, ಯೆಳ್ತಿಮಾರ್ ವೆಂಕಟೇಶ್ ಶೆಣೈ, ನಾಗ ಗುಡಿಯ ಶಿಲ್ಪಿ ಪದ್ಮನಾಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here