ಕರಾಯ: ಬಸ್ಸಿನ ಹಿಂಬದಿಗೆ ಸ್ಕೂಟರ್ ಡಿಕ್ಕಿ, ಸವಾರನಿಗೆ ಗಾಯ

0

ಪುತ್ತೂರು: ಖಾಸಗಿ ಬಸ್ಸಿನ ಹಿಂಬದಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದಲ್ಲಿ ಮೇ 3ರಂದು ಸಂಜೆ ನಡೆದಿದೆ.


ಸ್ಕೂಟರ್ ಸವಾರ ಕರಾಯ ನಿವಾಸಿ ಉಮ್ಮರ್ ಫಾರೂಕ್(36ವ.)ಗಾಯಗೊಂಡವರಾಗಿದ್ದು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಪ್ಪಿನಂಗಡಿ-ಗುರುವಾಯನಕರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್(ಕೆಎ 19, ಎಡಿ 9221)ನ ಚಾಲಕ ಸತೀಶ್ ಅವರು ಕರಾಯ ಮಸೀದಿ ಎದುರು ಯಾವುದೇ ಸೂಚನೆ ನೀಡದೇ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಹಿಂದಿನಿಂದ ಉಮ್ಮರ್ ಅವರು ಉಪ್ಪಿನಂಗಡಿಯಿಂದ ಕರಾಯ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್(ಕೆಎ 21, ಇಸಿ 2810) ಡಿಕ್ಕಿಯಾಗಿದೆ. ಪರಿಣಾಮ ಉಮ್ಮರ್ ಫಾರೂಕ್ ಅವರ ಮುಖಕ್ಕೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಕೂಟರ್‌ನ ಎದುರು ಬದಿ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here