ಪುರುಷರಕಟ್ಟೆಯ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಖ್ಯಾತ ಜನರಲ್ ಫಿಸಿಷಿಯನ್ ಡಾ.ಸ್ವಾತಿ ಆರ್ ಭಟ್ ಸೇವೆಗೆ ಲಭ್ಯ

0

ಪುತ್ತೂರು: ಪುರುಷರಕಟ್ಟೆಯಲ್ಲಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಪುತ್ತೂರಿನ ಖ್ಯಾತ ಜನರಲ್ ಫಿಸಿಷಿಯನ್, ಮಧುಮೇಹ ಹಾಗೂ ಹೃದ್ರೋಗ ತಜ್ಞೆ ಡಾ.ಸ್ವಾತಿ.ಆರ್.ಭಟ್ ರವರು ಸೋಮವಾರದಿಂದ ಶನಿವಾರ ಬೆಳಿಗ್ಗೆ 9 ಗಂಟೆಯಿಂದ 10ರ ತನಕ ಸೇವೆಗೆ ಲಭ್ಯರಿರುತ್ತಾರೆ.

ಪುತ್ತೂರಿನ ಮುಕ್ವೆ ನಿವಾಸಿ ನಿವೃತ್ತ ಮನೆಗಾರ್ ರಾಮಚಂದ್ರ ಭಟ್ ಮತ್ತು ಲಕ್ಷ್ಮೀ.ಆರ್.ಭಟ್ ದಂಪತಿ ಪುತ್ರಿಯಾಗಿರುವ ಇವರು ಎ.ಜೆ. ಇನ್ಸ್ಟಿಟ್ಯೂಟ್ ಒಫ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಮಂಗಳೂರಿನಲ್ಲಿ ತಮ್ಮ ಎಂ.ಬಿ.ಬಿ.ಎಸ್ ಪದವಿ ಮುಗಿಸಿ ವೈದ್ಯಕೀಯ ವಿಭಾಗದಲ್ಲಿ ಎಂ.ಡಿ(M. D. In General Medicine) ಪದವಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಧಾರವಾಡದಲ್ಲಿ ಪಡೆದಿರುತ್ತಾರೆ. ಇವರು ಒಳ ರೋಗಿ ಮತ್ತು ಹೊರ ರೋಗಿ ವಿಭಾಗದ ಎಲ್ಲಾ ರೀತಿಯ ಸಾಮಾನ್ಯ ಹಾಗೂ ತುರ್ತು ವಿಭಾಗದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುತ್ತಾರೆ. ವಿಶೇಷವಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ, ಬಿ.ಪಿ, ಮಧುಮೇಹ, ಹಾರ್ಮೋನ್ ಸಂಬಂಧಿ ಮತ್ತು ಎಲ್ಲಾ ಸಾಮಾನ್ಯ ವ್ಯಾಧಿಗಳ ತಪಾಸಣೆ ಹಾಗೂ ಚಿಕಿತ್ಸೆ ನೀಡುವಲ್ಲಿ ನುರಿತರಾಗಿರುತ್ತಾರೆ ಹಾಗೂ ವೈದ್ಯರ ಸಂದರ್ಶನ ಪಡೆಯಲು ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಮೊಬೈಲ್ 9036156242/9844638242 ನಂಬರ್ ಗೆ ಕರೆ ಮಾಡುವಂತೆ ಆತ್ರೇಯ ಮಲ್ಟಿಸ್ಪೆಷಲಿಟ ಕ್ಲಿನಿಕ್ ನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞರು ಡಾ. ಸುಜಯ್ ತಂತ್ರಿ, ಕೆಮ್ಮಿಂಜೆ ಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here