ಸಂಪ್ಯ:ಪಾದಾಚಾರಿಗೆ ರಿಕ್ಷಾ ಡಿಕ್ಕಿ -ನಿವೃತ ಶಿಕ್ಷಕರೊಬ್ಬರಿಗೆ ತೀವ್ರ ಗಾಯ

0

ಪುತ್ತೂರು: ಸಂಪ್ಯದಲ್ಲಿ ಪಾದಾಚಾರಿಯೊಬ್ಬರಿಗೆ ಆಟೋ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಮೇ.9 ರಂದು ನಡೆದಿದೆ. ಅಪಘಾತದಿಂದ ತೀವ್ರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ನಿವೃತ್ತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಭಟ್ (70ವ) ಅವರು ಗಾಯಳುವೆಂದು ಗುರುತಿಸಲಾಗಿದೆ.ಪುತ್ತೂರು ಸರಕಾರಿ ಆಸ್ಪತ್ರಗೆ ರೋಗಿಯೊಬ್ಬರನ್ನು ಕರೆದು ಕೊಂಡು ಬರುತ್ತಿದ್ದ ವೇಳೆ ಸಂಪ್ಯದಲ್ಲಿ‌ ರಸ್ತೆ ದಾಟುತ್ತಿದ್ದ ಸಂದರ್ಭ ಅವರಿಗೆ ಆಟೋ ರಿಕ್ಷಾ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸೂರ್ಯನಾರಾಯಣ ಅವರು ರಸ್ತೆ ಬಿದ್ದು ತಲೆಗೆ ತೀವ್ರ ಗಾಯವಾಗಿದೆ.ತಕ್ಷಣ ಮತ್ತೊಂದು ರಿಕ್ಷಾದಲ್ಲಿ ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ತೆಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here