ಕುಂದ್ರಕೋಟೆ ನಿವಾಸಿ ವಿದ್ಯಾದಾಯಿನಿ ನಿಧನ

0

ಪುತ್ತೂರು: ಕೊಡಿಪ್ಪಾಡಿ ಸಮೀಪದ ಕುಂದ್ರುಕೋಟೆ ನಿವಾಸಿ ವಿದ್ಯಾದಾಯಿನಿ(87ವ.)ರವರು ಅದೌಖ್ಯದಿಂದ ಮೇ.11ರಂದು ಸ್ವ ಗೃಹದಲ್ಲಿ ನಿಧನರಾದರು.
ಮೂಲತಃ ದೇಲಂಪಾಡಿ ಕುಟುಂಬದವರಾದ ವಿದ್ಯಾದಾಯಿನಿ ಕಳೆದ ಹಲವು ವರ್ಷಗಳಿಂದ ಕೊಡಿಪ್ಪಾಡಿ ಸಮೀಪ ಕುಂದ್ರುಕೋಟೆ ಎಂಬಲ್ಲಿ ಪುತ್ರನೊಂದಿಗೆ ವಾಸವಾಗಿದ್ದರು.
ಮೃತರು ಪುತ್ರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಸೀನಿಯರ್ ಮ್ಯಾನೇಜರ್ ಕೃಷ್ಣ ಡಿ.ಎಸ್., ಎಲ್ಲೈಸಿ ಮುಖ್ಯ ವಿಮಾ ಸಲಹೆಗಾರ ಹರಿಪ್ರಸಾದ್ ಡಿ.ಎಸ್., ಪುತ್ರಿಯರಾದ ಶ್ಯಾಮಲಾ, ಇಂದಿರಾ, ಕೆನರಾ ಬ್ಯಾಂಕ್ ಉದ್ಯೋಗಿ ಜಯಲಕ್ಷ್ಮಿ ಡಿ.ಎಸ್, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅಪರಾಹ್ನ ಅಂತ್ಯಕ್ರಿಯೆ;
ಮೃತ ದೇಹದ ಅಂತ್ಯಕ್ರಿಯೆಗಳು ಇಂದು(ಮೇ.11) ಅಪರಾಹ್ನ ನೆಲ್ಲಿಕಟ್ಟೆಯ ಹಿಂದು ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here