ಪುತ್ತೂರು ಉಪ್ಪಿನಂಗಡಿ ರಸ್ತೆಯ ಎರಡೂ ತಿರುವುಗಳನ್ನು ತೆರವು ಮಾಡಿ-ಲೋಕೋಪಯೋಗಿ ಇಲಾಖೆಗೆ ಶಾಸಕರ ಸೂಚನೆ

0

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಆದರ್ಶನಗರ ಮತ್ತು ಬೊಳಂತಿಲದಲ್ಲಿರುವ ಎರಡೂ ತಿರುವುಗಳನ್ನು ತೆರವು ಮಾಡಿ ನೇರ ರಸ್ತೆ ನಿರ್ಮಾಣ ಮಾಡಬೇಕೆಂದು ಶಾಸಕರಾದ ಅಶೋಕ್ ರೈಯವರು ಲೋಕೋಪಯೋಗಿ ಇಂಜನಿಯರ್‌ಗಳಿಗೆ ಸೂಚನೆಯನ್ನು ನೀಡಿದ್ದಾರೆ.


ಸೋಮವಾರ ರಸ್ತೆಯ ಕಾಮಗಾರಿಯನ್ನು ವಿಕ್ಷಣೆ ಮಾಡಿದ ಶಾಸಕರು ಎರಡೂ ತಿರುವುಗಳು ಅಪಾಯಕಾರಿಯಾಗಿದೆ. ನೇರ ರಸ್ತೆ ಮಾಡಲು ಜಾಗವಿದೆ , ಈಗ ಇರುವ ತಿರುವನ್ನು ತೆರವು ಮಾಡಬೇಕು ಮತ್ತು ಮಳೆ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ಈಗಲೇ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ರಘು ಬೆಳ್ಳಿಪ್ಪಾಡಿ, ಯುನಿಕ್ ಅಬ್ದುಲ್ ರಹಿಮಾನ್ , ಜೋಕಿಂಡಿಸೋಜಾ ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here