ಬಲ್ಯ: ಹೃದಯ ಸಂಬಂಧಿ ಕಾಯಿಲೆ ವಿದ್ಯಾರ್ಥಿ ಮೃತ್ಯು

0

ಕಡಬ: ಹೃದಯ ಸಂಬಂಧಿತ ತೊಂದರೆಯಿಂದ ಬಳಲುತ್ತಿದ್ದ, ಬಲ್ಯ ಗ್ರಾಮದ ಪಾಲ್ತಿಮಾರ್ ನಿವಾಸಿ ಗೋಪಾಲಕೃಷ್ಣ ಎಂಬವರ ಪುತ್ರ, ಕಡಬ ಸೈಂಟ್ ಆನ್ಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಗನ್ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆ ಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಈ ಹಿಂದೆಯೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಗಗನ್‌ರವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ.14ರಂದು ಮೃತಪಟ್ಟಿದ್ದಾರೆ. ಮೃತ ಗಗನ್ ತಂದೆ, ಹಾಗೂ ತಾಯಿ ನಿಶ್ಮಿತಾ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here