ಬೊಳುವಾರು: ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಆನೆಗುಂದಿ ಗುರುಸೇವಾ ಪರಿಷತ್ ಮಹಾ ಮಂಡಲ ಪುತ್ತೂರು ಇದರ ವತಿಯಿಂದ ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇವರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ “ಶ್ರೀರಾಮ ದರ್ಶನ” ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ್ ಆಚಾರ್ಯ, ಮದ್ದಳೆಯಲ್ಲಿ ಕೃಷ್ಣಯ್ಯ ಆಚಾರ್ಯ, ಪುತ್ತೂರು, ಚೆಂಡೆಯಲ್ಲಿ ಅದ್ವೈತ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ, ಜಯಲಕ್ಷ್ಮಿ ವಿ ಭಟ್, ಇಂದಿರಾ ಪಿ ಆಚಾರ್ಯ, ಹೀರಾ ಉದಯ್, ಪ್ರೇಮಾ ನೂರಿತ್ತಾಯ ಸಹಕರಿಸಿದರು. ಸೇವಾ ಪರಿಷತ್ ನ ಪುತ್ತೂರು ವಲಯದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು. ಆನೆಗುಂದಿ ಶ್ರೀಪಾದಂಗಳವರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು. ಪುರುಷೋತ್ತಮ ಆಚಾರ್ಯ ಮತ್ತು ಇಂದಿರಾ ಆಚಾರ್ಯ ಕಾರ್ಯಕ್ರಮ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here