ಹೋರಿಗಳು ನಾಪತ್ತೆ – ವಿಹಿಂಪ, ಬಜರಂಗದಳದಿಂದ ದೂರು

0

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುತ್ತಿದ್ದ ಹೋರಿಗಳೆರಡು ನಾಪತ್ತೆಯಾದ ಕುರಿತು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

ಮೇ 1ರ ರಾತ್ರಿಯಿಂದ ಹೋರಿಗಳು ನಾಪತ್ತೆಯಾಗಿವೆ. ಇದು ಗೋ ಕಳ್ಳತನ ಮಾಡಿದವರ ಕೃತ್ಯವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ನೀಡುವ ಸಂದರ್ಭ ಬಜರಂಗದಳ ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ಲು, ಹರ್ಷಿತ್ ಬಲ್ನಾಡ್, ರೂಪೇಶ್ ಬಲ್ನಾಡು, ಜೀವನ್ ಬಲ್ನಾಡು, ಗುರುರಾಜ್ ಬಲ್ನಾಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here