ಸೌತಡ್ಕ: ಬೆಂಗಳೂರಿನ ಮಹಿಳೆಯ 2.16 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 5 ಸಾವಿರ ರೂ.ನಗದು ಕಳ್ಳತನ

0

ನೆಲ್ಯಾಡಿ: ಧರ್ಮಸ್ಥಳ, ಸೌತಡ್ಕಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 2.16 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ.ನಗದು ಕಳ್ಳತನಗೊಂಡಿರುವ ಘಟನೆ ಮೇ.15ರಂದು ಬೆಳಿಗ್ಗೆ ನಡೆದಿದೆ.


ಬೆಂಗಳೂರು ನಿವಾಸಿ ಅಂತು ಬಾಯಮ್ಮ(68ವ.) ಚಿನ್ನಾಭರಣ, ನಗದು ಕಳೆದುಕೊಂಡವರು. ಅಂತು ಬಾಯಮ್ಮ ಅವರು ಮೇ.13ರಂದು ರಾತ್ರಿ ಬೆಂಗಳೂರಿನಿಂದ ಹೊರಟು ಮೇ 14ರಂದು ಬೆಳಗ್ಗಿನ ಜಾವ ಧರ್ಮಸ್ಥಳ ದೇವಸ್ಥಾನ ತಲುಪಿ ದೇವಸ್ಥಾನದ ಮಾಹಿತಿ ಕಚೇರಿ ಬಳಿ ವಿಶ್ರಾಂತಿ ಪಡೆದು ಸಂಜೆ ದೇವರ ದರ್ಶನ ಮುಗಿಸಿ ರಾತ್ರಿ ಮಾಹಿತಿ ಕಚೇರಿ ಬಳಿ ವಿಶ್ರಾಂತಿ ಪಡೆದುಕೊಂಡಿದ್ದರು. ಮೇ.15ರಂದು ಬೆಳಿಗ್ಗೆ ಧರ್ಮಸ್ಥಳದಿಂದ ಸೌತಡ್ಕ ದೇವಸ್ಥಾನಕ್ಕೆ ಹೊರಡುವ ಮೊದಲು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ 5 ಸಾವಿರ ರೂ.ನಗದು ಹಾಗೂ ಚಿನ್ನಾಭರಣಗಳಿದ್ದ ಪರ್ಸನ್ನು ನೋಡಿದ್ದು ಬಳಿಕ ಸೌತಡ್ಕ ದೇವಸ್ಥಾನ ತಲುಪಿ ಅಲ್ಲಿ ದೇವರ ದರ್ಶನ ಮುಗಿಸಿ ಗಂಟೆ ಖರೀದಿಸಲೆಂದು ಬೆಳಿಗ್ಗೆ 11 ಗಂಟೆಗೆ ಅಂಗಡಿಗೆ ಹೋಗಿದ್ದು ಅಲ್ಲಿ ಪರ್ಸನ್ನು ನೋಡಿದ ಸಮಯ ಪರ್ಸನಲ್ಲಿ ಇಟ್ಟಿದ್ದ ನಗದು ಹಣ ಹಾಗೂ ಚಿನ್ನಾಭರಣ ಇರುವ ಬಾಕ್ಸ್ ನಾಪತ್ತೆಯಾಗಿತ್ತು. ತನ್ನ ಬ್ಯಾಗಿನಲ್ಲಿದ್ದ ಚಿನ್ನ ಮತ್ತು ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನದ ಅಂದಾಜು ಮೌಲ್ಯ ರೂ.2.16 ಲಕ್ಷ ಹಾಗೂ 5 ಸಾವಿರ ರೂ. ನಗದು ಕಳವು ಆಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here