ಪುಣಚ: ಮಹಮ್ಮಾಯಿ ಕುಣಿತ ಭಜನಾ ತಂಡದಿಂದ ಪುಸ್ತಕ ವಿತರಣೆ

0

ಪುಣಚ: ಪುಣಚ ಕೆಲ್ಲಾಳಿ ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡದ ತಂಡದವರಿಂದ ತಂಡದಲ್ಲಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ಮೇ.26ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ವಾಮನ ನಾಯ್ಕ ಕೆಲ್ಲಾಳಿ, ಕೊರಗಪ್ಪ ನಾಯ್ಕ ಗರಡಿ, ಮತ್ತು ಭಜನಾ ತಂಡದ ಸದಸ್ಯ ಕೇಶವ ನಾಯ್ಕ ಕೆಲ್ಲಾಳಿ ದೀಪ ಬೆಳಗಿಸಿ, ಉದ್ಘಾಟಿಸಿ ಪುಸ್ತಕ ವಿತರಿಸಿ ಶುಭ ಹಾರೈಸಿದರು.ಭಜನಾ ತಂಡದ ಸದಸ್ಯರು ಪ್ರಾರ್ಥಿಸಿದರು. ದಿನೇಶ ಕೆಲ್ಲಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಕೆಲ್ಲಾಳಿ ವಂದಿಸಿದರು.
ಶ್ರೀ ಮಹಾಮ್ಮಾಯಿ ಕುಣಿತ ಭಜನಾ ತಂಡದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here