![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು: ಕರ್ನಾಟಕ ಸರಕಾರದ ಉಪ ಸಭಾಪತಿ ರುದ್ರಪ್ಪ ಲಮಾಣಿ ದಂಪತಿ ಸಹಿತ ಕಡಬ ತಾಲೂಕಿನ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೇ 26ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
![](https://puttur.suddinews.com/wp-content/uploads/2024/05/efd12f45-cfb1-4f70-bc11-2e8cb79b50f6.jpg)
ಈ ಸಂದರ್ಭದಲ್ಲಿ ಕಾರ್ಯನಿರ್ವಾಣಾಧಿಕಾರಿ ಡಾ| ನಿಂಗಯ್ಯ, ಕಾಂಗ್ರೆಸ್ ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಾಧವ ದೇವರಗುಡ್ಡೆ, ಮೋಹನದಾಸ ರೈ, ಸುರೇಶ್ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪ ಸಭಾಪತಿ ರುದ್ರಪ್ಪ ಅವರು ಮೇ 31ರಂದು ನಿವೃತ್ತರಾಗಲಿರುವ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ ಅವರನ್ನು ಗೌರವಿಸಿದರು.
![](https://puttur.suddinews.com/wp-content/uploads/2024/05/6f815c93-5b87-4ec1-a53e-bda5f83488e0.jpg)