ಕಡಬ: ಮೆಸ್ಕಾಂನಿಂದ ಕೊಂಬಾರು, ಸಿರಿಬಾಗಿಲು, ಕೊಣಾಜೆ ಭಾಗದಲ್ಲಿ ವಿದ್ಯುತ್ ಬಳಕೆದಾರರ ಸಹಕಾರದೊಂದಿಗೆ ಎಚ್.ಟಿ ಲೈನ್‌ಗೆ ಬಾಗಿರುವ ಮರಗಳ ಗೆಲ್ಲು ತೆರವು ಕಾರ್ಯಾಚರಣೆ

0

ಕಡಬ: ಕೊಂಬಾರು ಗ್ರಾಮ ಮತ್ತು ಸಿರಿಬಾಗಿಲು ಗ್ರಾಮದ ಕೆಂಜಾಳ, ದಮ್ಮಡ್ಕ, ಅನಿಲ, ಕಾಪಾರು ಕೈಂತಿಲ, ಪೆರ್ಜೆ, ದೇರಣೆ, ಆಮಾಡ್ಕ, ನೀರಾಯ ಭಾಗದಲ್ಲಿ ಹಾಗೂ ಕೊಣಾಜೆ ಪೇಟೆಯಿಂದ ಬೆತ್ತೋಡಿವರೆಗೆ ಎಚ್.ಟಿ ಲೈನ್‌ಗೆ ಬಾಗಿರುವ ಮರದ ಗೆಲ್ಲು ತೆರವುಗೊಳಿಸುವ ಕಾರ್ಯ ಮೇ.26ರಂದು ನಡೆಯಿತು. ಮೆಸ್ಕಾಂ ಜೊತೆ ವಿದ್ಯುತ್ ಬಳಕೆದಾರರು ಶ್ರಮದಾನದಾನದಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ಭಾಗವಹಿಸಿದ ಎಲ್ಲಾ ವಿದ್ಯುತ್ ಗ್ರಾಹಕರಿಗೆ ಮೆಸ್ಕಾಂ ಇಲಾಖೆಯ ಪರವಾಗಿ ಬಿಳಿನೆಲೆ ಮೆಸ್ಕಾಂ ಶಾಖಾಧಿಕಾರಿ ವಸಂತ ಕುಮಾರ್ ಟಿ.ಎಂ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here