ಮೇ 31:ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ವಾಹನ ಚಾಲಕ ಗಿರಿಧರ ಗೌಡ ಸೇವಾ ನಿವೃತ್ತಿ

0

ಪುತ್ತೂರು: ಸಾರ್ವಜನಿಕ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಸುಮಾರು 27 ವರ್ಷ ನಾಲ್ಕು ತಿಂಗಳು ಸೇವೆಗೈದ ಹಿರಿಯ ವಾಹನ ಚಾಲಕ ಗಿರಿಧರ ಗೌಡರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ತಿಮ್ಮಪ್ಪ ಗೌಡ ಹಾಗೂ ಹೊನ್ನಮ್ಮ ದಂಪತಿ ಪುತ್ರರಾಗಿರುವ ಗಿರಿಧರ ಗೌಡರವರು 1997, ಫೆಬ್ರವರಿ 5 ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೊಡಿಯಾಲುಬೈಲು ಮಂಗಳೂರು ಇಲ್ಲಿ ಸೇವೆ ಆರಂಭಿಸಿ, 2000, ಜುಲೈ 10ರ ತನಕ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಅವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ವರ್ಗಾವಣೆ ಹೊಂದಿ ಸೇವೆಯನ್ನು ಮುಂದುವರೆಸಿದ್ದರು. ಈ ನಡುವೆ 2022-24ರ ವರೆಗೆ ಗಿರಿಧರ ಗೌಡರವರು ಪುತ್ತೂರು ತಾಲೂಕು ಪಂಚಾಯತ್ ನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದರು.

ಗಿರಿಧರ ಗೌಡರವರು ಪ್ರಸ್ತುತ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಪುತ್ತೂರು ತಾಲೂಕಿನ ಅಧ್ಯಕ್ಷರಾಗಿದ್ದು, ಈ ಹಿಂದೆ ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತುತ ಗಿರಿಧರ ಗೌಡರವರು ಪತ್ನಿ ಲೀಲಾವತಿ ಎನ್, ಪುತ್ರರಾದ ರೇಮಂತ್ ಎಸ್, ಭವಿಷ್ ಎಸ್ ರವರೊಂದಿಗೆ ಶಿಂಗಾಣಿ ಎಂಬಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here