ನೆಲ್ಯಾಡಿ ಶಬರೀಶ ಶಾಖೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾತೃವಂದನ ಕಾರ್ಯಕ್ರಮ

0

ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೆಲ್ಯಾಡಿ ಶಬರೀಶ ಶಾಖೆ ಮಾತೃ ಭೋಜನ ಮಾತೃ ವಂದನ ಮಾತೃ ಭೋಜನ ಕಾರ್ಯಕ್ರಮ ನೆಲ್ಯಾಡಿ ಶಬರೀಶ ಸಭಾಭವನದಲ್ಲಿ ನಡೆಯಿತು. ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷ್ಮೀ ನಾರಾಯಣ ಅವರು ಮಾತನಾಡಿ ತಾಯಿಯ ಮಹತ್ವವನ್ನು ತಿಳಿಸಿ ಜಗತ್ತಿನಲ್ಲಿ ತಾಯಿಯನ್ನು ದೇವರ ರೂಪದಲ್ಲಿ ಕರುಣಿಸಿದ್ದಾನೆ.

ನಮಗೆ ಜೀವನದಲ್ಲಿ ಇಂತಹ ತಾಯಿಯೇ ಬೇಕೆಂದು ಆಯ್ಕೆ ಮಾಡಲು ಅವಕಾಶಗಳು ಇಲ್ಲ ಆದರೆ ತಾಯಿಯನ್ನು ದೇವರ ರೂಪದಲ್ಲಿ ನಮಗೆ ಕಾಣಲು ಸಾಧ್ಯವಿದೆ ಎಂದು ತಿಳಿಸಿ ದಿನಾಲೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ದಿನಾಲೂ ಯೋಗಭ್ಯಾಸದಲ್ಲಿ ವಿವಿಧ ಶಾಖೆಗಳ ಮೂಲಕ ತೊಡಗಿಸಿ ಕೊಳ್ಳುತ್ತಿದ್ದಾರೆ.ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಶಿಕ್ಷಣ ದ ಜೊತೆಗೆ ಸಂಸ್ಕಾರವನ್ನು ಬೆಳೆಸಬೇಕು. ನಾವೆಲ್ಲರೂ ದೇಹದ ಅಂಗಗವನ್ನು ಪ್ರದರ್ಶಿಸುವ ಡ್ರೆಸ್ ಗಳನ್ನು ಅಳವಡಿಸಿಕೊಳ್ಳದೇ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದ ಯೋಗ ಶಿಕ್ಷಕಿ ಶಶಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ.ಎನ್.ಎಂ ಕಾಲೇಜ್ ನ‌ ನಿವೃತ್ತ ಪ್ರಾಂಶುಪಾಲೆ ಮೀನಾಕ್ಷಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಶಾಖೆಯ ಸಂಚಾಲಕ ರವಿಚಂದ್ರ ಹೊಸಕ್ಲು, ಯೋಗಬಂಧುಗಳಾದ ಡಾ!ಅನಿಶ್, ರಾಮಕೃಷ್ಣ, ಹೇಮಾವತಿ, ಶೀನಪ್ಪ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ವೈಯಕ್ತಿಕ ಪ್ರಾರ್ಥನೆಯನ್ನು ಯೋಗಬಂಧುಗಳಾದ ಸುಧಾ ನೇರವೆರಿಸಿ ಹೇಮಾವತಿ ಸ್ವಾಗತಿಸಿದರು. ವರದಿಯನ್ನು ಶುಭಲಕ್ಷ್ಮಿ ಅವರು ವಾಚಿಸಿ, ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಸುಲತಾರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕದ್ರಿ ನಗರ ಸಂಚಾರಕ ಆನಂದ ಕುಂಟಿನಿ, ತಾಲೂಕು ಸಹಶಿಕ್ಷಣ ಪ್ರಮುಖರಾದ ಪ್ರದೀಪ ಯೋಗ ಬಂಧುಗಳಾದ ಕೃಷ್ಣಪ್ಪ, ಯಶೋಧರ,ರಾಜೇಶ್ ಶೆಟ್ಟಿ ಸಂಪ್ಯಾಡಿ, ಸದಾಶಿವ ಶೆಟ್ಟಿ ಮಾರಂಗ, ವೆಂಕಪ್ಪ, ಅಶೋಕ್, ಮೋಹಿನಿ, ಗಾಯತ್ರಿ ಪ್ರತೀಮಾ, ಮಲ್ಲಿಕಾ, ಶರ್ಮಿಳಾ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here