ಪುತ್ತೂರು: ಉಡುಪಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಚಂದ್ರಶೇಖರರವರು ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಇವರು ಉಡುಪಿಯ ಕೋಟ, ಬಂದರು ಟ್ರಾಫಿಕ್, ಉಳ್ಳಾಲ, ಸಂಪ್ಯ, ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಬಣಕಲ್, ಪುಂಜಾಲಕಟ್ಟೆ, ವೇಣೂರು, ಉಪ್ಪಿನಂಗಡಿ, ಧರ್ಮಸ್ಥಳ, ಅರಣ್ಯ ಸಂಚಾರಿದಳ ಮಂಗಳೂರು, ಉಪ್ಪಿನಂಗಡಿ, ಉಡುಪಿ ಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಪತ್ನಿ ಪುಷ್ಪಾವತಿ, ಪುತ್ರಿ ಶ್ರದ್ಧಾ ಹಾಗೂ ಪುತ್ರ ಶಮಂತ್ರವರೊಂದಿಗೆ ಬನ್ನೂರು ಕರ್ಮಲದಲ್ಲಿ ವಾಸವಾಗಿದ್ದಾರೆ.