ಆಲಂಕಾರು ಜೆಸಿಐಗೆ ಮಧ್ಯಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ

0

ಕಡಬ: ಜೆಸಿಐ ವಿಟ್ಲ ಇದರ ಆತಿಥ್ಯದಲ್ಲಿ ಜೂ.2ರಂದು ಶತಮಾನೋತ್ಸವ ಸ್ಮಾರಕ ಸಮುದಾಯ ಭವನ ವಿಟ್ಲ ಇಲ್ಲಿ ನಡೆದ ಜೆಸಿಐ ಮಧ್ಯಂತರ ಸಮ್ಮೇಳನ (ತುಂತೂರು-ಇದು ಜೇಸಿಗಳ ಸಿಂಚನ)ದಲ್ಲಿ ಆಲಂಕಾರು ಜೆಸಿಐಗೆ ತನ್ನ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಹಲವಾರು ರೀತಿಯ ಪ್ರಶಸ್ತಿಗಳು, ಮನ್ನಣೆ ದೊರಕಿದೆ.


ಯುವ ರತ್ನ ಪ್ರಶಸ್ತಿ, ರಜತ ಸಿಂಚನ ಪ್ರಶಸ್ತಿ, ಪ್ರೇರಣ ತರಬೇತಿಗಾಗಿ ಪ್ರಶಸ್ತಿ, ಎಅ ಮಿನುಗುತಾರೆ ಪ್ರಶಸ್ತಿ,Outstanding Lom President Runner Up ಪ್ರಶಸ್ತಿ, Silver Lom ಪ್ರಶಸ್ತಿ, Mission One Lakh ಪ್ರಶಸ್ತಿ, ಆಲಂಕಾರು ಘಟಕ ಅಧ್ಯಕ್ಷರಾದ ಮಮತಾ ಅಂಬರಾಜೆ ಇವರಿಗೆ Star Performer ಪ್ರಶಸ್ತಿ, ಹೀಗೆ ಹಲವಾರು ಮನ್ನಣೆಗಳು ಆಲಂಕಾರು ಘಟಕಕ್ಕೆ ಲಭಿಸಿದೆ. ಸಮ್ಮೇಳನದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಪ್ರದೀಪ್ ಬಾಕಿಲ, ತೋಷಿತ್ ರೈ, ಗುರುಕಿರಣ್ ಶೆಟ್ಟಿ ಬಾಲಾಜೆ, ಅಜಿತ್ ರೈ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಹೇಮಲತಾ ಬಾಕಿಲ ಮತ್ತು ಸದಸ್ಯರಾದ ಪ್ರಶಾಂತ್ ರೈ ಆಲಂಕಾರು, ದೇವಕಿ ಹಿರಿಂಜ, ಕೃತಿಕಾ ಗುರುಕಿರಣ್ ಶೆಟ್ಟಿ, ಜಯಶ್ರೀ ಅಲೆಪ್ಪಾಡಿ, ಧನ್ಯಶ್ರೀ, ಜೆಜೆಸಿ ಧನ್ಯಶ್ರೀ, ಮನೀಷ, ಮಾ| ಅಶ್ಲೇಷ್ ಬಾಕಿಲ, ಅದ್ವಿಕಾ ಬಾಕಿಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here