ಅರಂತಬೈಲು: ರಸ್ತೆಗೆ ಬಿದ್ದ ಮರ-ಸ್ಥಳೀಯರಿಂದ ತೆರವು

0

ನೆಲ್ಯಾಡಿ: ಗೋಳಿತ್ತೊಟ್ಟು-ರಾಮಕುಂಜ ರಸ್ತೆಯ ಅರಂತಬೈಲು ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಕೆಲ ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಜೂ.4ರಂದು ಸಂಭವಿಸಿದೆ. ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ಮರ ವಿದ್ಯುತ್ ತಂತಿಯ ಮೇಲೆಯೇ ಬಿದ್ದಿತ್ತು. ಪವರ್‌ಮ್ಯಾನ್ ದುರ್ಗಾಸಿಂಗ್ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ತಂತಿಯ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಲು ಸಹಕರಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ, ವಿಶ್ವನಾಥ ಪೆರ್ನಾರು, ಮನೋಹರ ಕುಮಾರ್ ಜೈನ್, ಮಹೇಶ್ ಪಾತ್ರಮಾಡಿ ಹಾಗೂ ಇತರೇ ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here