ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಲ್ಲಿ ಕುಟುಂಬದ ಪಿಂಚಣಿದಾರರಿಗೂ ಸದಸ್ಯತ್ವ ಅವಕಾಶ

0

ಪುತ್ತೂರು: ಬಪ್ಪಳಿಗೆ ಸರಕಾರಿ ನೌಕರರ ಸಮುದಾಯ ಭವನದ ಪ್ರಥಮ ಮಹಡಿಯಲ್ಲಿ ಕಚೇರಿ ಹೊಂದಿರುವ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಲ್ಲಿ ಕುಟುಂಬದ ಪಿಂಚಣಿದಾರರಿಗೂ ಸದಸ್ಯತ್ವ ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ನಿವೃತ್ತ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಲ್ಲಿ ಈಗಾಗಲೇ ಸದಸ್ಯರ ಸಂಖ್ಯೆ 1 ಸಾವಿರಕ್ಕೆ ತಲುಪುತ್ತಿದೆ. ಸೇವಾ ನಿವೃತ್ತಿ ಪಡೆದ ರಾಜ್ಯ ಸರಕಾರಿ ನೌಕರರು, ಅನುದಾನಿತ ಶಾಲೆಗಳ ಶಿಕ್ಷಕರು, ಸ್ಥಳೀಯ ಸಂಸ್ಥೆಗಳ ನಿವೃತ್ತ ನೌಕರರು ಸಂಘದ ಸದಸ್ಯರಾಗಲು ವಿನಂತಿಸಲಾಗಿದೆ. ಕುಟುಂಬದ ಪಿಂಚಣಿದಾರರು ಕೂಡಾ ಸಂಘದ ಸದಸ್ಯತ್ವ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ ಸಂಘದಲ್ಲಿ ಸದಸ್ಯತ್ ಪಡೆಯುವಂತೆ ವಿನಂತಿಸಲಾಗಿದೆ. ಸಂಘದ ಕಚೇರಿಯು ಪ್ರತಿ ದಿನ ಬೆಳಿಗ್ಗೆ ಗಂ 10 ರಿಂದ ಸಂಜೆ ಗಂಟೆ 4ರ ತನಕ ತೆರೆದಿರುತ್ತದೆ ಎಂದು ಸಂಘದ ಅಧಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here