ಕನ್ಯಾನ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

0

ವಿಟ್ಲ: ಕಾಲು ಜಾರಿ ತೋಟದ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಜೂ.6ರಂದು ಕನ್ಯಾನ ಗ್ರಾಮದ ಪರಕಜೆಯಲ್ಲಿ ನಡೆದಿದೆ.
ಕನ್ಯಾನ ಪರಕಜೆ ನಿವಾಸಿ ಬಾಲಕೃಷ್ಣ ಭಂಡಾರಿ(56 ವ.) ಮೃತ ದುರ್ದೈವಿ. ಬಾಲಕೃಷ್ಣರವರು ಜೂ.6ರ ಮಧ್ಯಾಹ್ನ ತೋಟಕ್ಕೆಂದು ತೆರಳಿದ್ದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಬಳಿಕ ವಿವಿಧೆಡೆ ಹುಡುಕಾಟ ನಡೆಸಿದಾಗ ರಾತ್ರಿ 10 ಗಂಟೆ ಸುಮಾರಿಗೆ ಅವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.


ಮನೆಯ ಪಕ್ಕದ ತೋಟದಲ್ಲಿರುವ ಸುಮಾರು 10 ಅಡಿ ಆಳದ ಕೆರೆಗೆ ಇಳಿಯಲು ಮಾಡಿದ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಅವರ ಅಣ್ಣನ ಪುತ್ರ ಅಶೋಕ್ ಪಿ.ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here