ಶಾಸಕ ಅಶೋಕ್‌ ರೈ ಸೂಚನೆಯ 24 ಗಂಟೆಯೊಳಗೆ ಬಪ್ಪಳಿಗೆ ಅಪಾಯಕಾರಿ ಮರಗಳ ತೆರವು

0

ಪುತ್ತೂರು: ಬಪ್ಪಳಿಗೆಯ ಮುಖ್ಯ ರಸ್ತೆಗಳ‌ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಶಾಸಕ ಅಶೋಕ್‌ ಕುಮಾರ್‌ ರೈ ಸೂಚನೆ ನೀಡಿದ್ದ‌ರು. ಸೂಚನೆ ನೀಡಿದ 24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವು‌ ಮಾಡಿದೆ.


ಭಾನುವಾರ ಬಪ್ಪಳಿಗೆಯಲ್ಲಿ‌ ಮರವೊಂದು ಗಾಳಿಗೆ ಉರುಳಿ ಬಿದ್ದು ಎಂಟು ವಿದ್ಯುತ್ ಕಂಬಗಳು ಮುರಿದಿದ್ದವು. ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಮರ ತೆರವು ಮಾಡದೇ ಇರುವ ವಿಚಾರಕ್ಕೆ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡಿದ್ದರು. 24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ತೆರವು‌ ಮಾಡುವಂತೆ ಸೂಚನೆ ನೀಡಿದ್ದರು.‌ಅದರಂತೆ ಅಧಿಕಾರಿಗಳು ಮರಗಳನ್ನು ತೆರವು‌ ಮಾಡಿದ್ದಾರೆ.‌ಹಲವು ವರ್ಷಗಳಿಂದ ಇಲ್ಲಿನ ಮರಗಳನ್ನು ತೆರವು ಮಾಡಲು ಇಲಾಖೆಗೆ ಮನವಿ ಮಾಡಿದ್ದರೂ ತೆರವು ಕಾರ್ಯಾಚರಣೆ ನಡೆದಿರಲಿಲ್ಲ. ಶಾಸಕರ ಭೇಟಿ ಬಳಿಕ ತೆರವು ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here