ಕಾಡಾನೆಗಳನ್ನು ಬಂದ ದಾರಿಗೆ  ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಂಬಾರೆ ತಂಡದ ವ್ಯಕ್ತಿಗೆ ಗಾಯ !

0

ಪುತ್ತೂರು:  ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿ ಎಂಬಲ್ಲಿ ಕಾಡನೆಗಳನ್ನು ಬಂದ ದಾರಿಗೆ ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಂಬಾರೆಯ ಆನೆ ಸಲಹಾ ತರಬೇತಿ‌ ಕೇಂದ್ರದ ವ್ಯಕ್ತಿಯೊಬ್ವರು ಗಾಯಗೊಂಡ ಘಟನೆ ಜೂ.11 ರ ಸಂಜೆ ನಡೆದ ಬಗ್ಗೆ ವರದಿಯಾಗಿದೆ.

ಜೂ.10 ರಂದು ರಾತ್ರಿ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿಯಲ್ಲಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳೆರಡು ಪಕ್ಕದ ಅಂದ್ರಗೇರಿ ಕಾಡು ಪ್ರದೇಶದಲ್ಲಿದ್ದು ಜನರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಆನೆಯನ್ನು ಬಂದ ದಾರಿಯಲ್ಲೆ ಸುರಕ್ಷಿತವಾಗಿ ಕಳುಹಿಸುವಲ್ಲಿ ದುಬಾರೆ ಆನೆ ಸಲಹಾ ಸಮಿತಿಯವರು ಪಟಾಕಿ ಸಿಡಿಸಿ ಆನೆಯನ್ನು ಬೆನ್ನಟ್ಟುತ್ತಿದ್ದರು. ಈ ವೇಳೆ ದುಬಾರೆಯ ಆನೆ ತರಬೇತಿ ಪರಿಣಿತ ವ್ಯಕ್ತಿಯೊಬ್ವರು ಪಟಾಕಿಗೆ ಬೆಂಕಿ‌ಕೊಟ್ಟು ಬಿಸಾಡುವ ವೇಳೆ ಪಕ್ಕದ ಗುಂಡಿಯಲ್ಲಿ  ಮಲಗಿದ್ದ ಆನೆ ಏಕಾಏಕಿ ಎದ್ದಾಗ ಗಲಿಬಿಲಿಗೊಂಡ ವ್ಯಕ್ತಿ ತಾನು ಬಿಸಾಡಿದ ಪಟಾಕಿ ಮರಕ್ಕೆ ತಾಗಿ ತನ್ನ ಕಾಲಿಗೆ ಬಿದ್ದು ಸ್ಪೋಟಗೊಂಡಿದೆ. ತಕ್ಷಣ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here