ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷರಾಗಿ ಗುರುವಪ್ಪ ಪೂಜಾರಿ, ಸದಸ್ಯರಾಗಿ ಪ್ರಭಾ ಆಚಾರ್ಯ, ಶೀನಪ್ಪ ಕುಲಾಲ್

0

ಪುತ್ತೂರು: ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಬಿಜಪಿ ಉಪಾಧ್ಯಕ್ಷರಾಗಿ ಪುಣಚ ಗ್ರಾಮ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ದಲ್ಕಾಜೆಗುತ್ತು ಗುರುವಪ್ಪ ಪೂಜಾರಿ ಮತ್ತು ಸದಸ್ಯರಾಗಿ ಪುತ್ತೂರು ನಗರಸಭೆ ಮಾಜಿ ಸದಸ್ಯೆ ಪ್ರಭಾ ಆಚಾರ್ಯ ಮತ್ತು ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ ಅವರು ನೇಮಕ ಮಾಡಿದ್ದಾರೆ.


ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷರಾಗಿ‌ ಮಹೇಶ್ ಜೋಗಿ ಸಹಿತ ಸುಮಾರು 31 ಮಂದಿಯ ಸಮಿತಿ ರಚನೆಯನ್ನು ಬಿಜೆಪಿ‌ ಜಿಲ್ಲಾ ಅಧ್ಯಕ್ಷ ಸತೀಶ ಕುಂಪಾಲ ಅವರು ನೇಮಕ ಮಾಡಿದ್ದಾರೆ. ಗುರುವಪ್ಪ ಪೂಜಾರಿ ಅವರು ಪುಣಚ ಬಿಜೆಪಿ‌ ಗ್ರಾಮ ಸಮಿತಿ ಮಾಜಿ‌ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರಾಗಿ, ಹಾಲು ಉತ್ಪಾದಕರ ಬಿಜೆಪಿ ಪ್ರಕೋಷ್ಠದ ಸಹಸಂಚಾಲಕರಾಗಿದ್ದರು.

LEAVE A REPLY

Please enter your comment!
Please enter your name here